BIG NEWS: ಪಕ್ಷದಲ್ಲಿದ್ದಾಗ ಕಾಣದ ಕುಟುಂಬ ರಾಜಕಾರಣ, ಪಕ್ಷ ತೊರೆಯುವಾಗ ಕಾಣುತ್ತಿದೆಯೇ….? ಶಿವಲಿಂಗೇಗೌಡರ ವಿರುದ್ಧ HDK ವಾಗ್ದಾಳಿ

ಹಾಸನ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿರುವ ಶಾಸಕ ಶಿವಲಿಂಗೇಗೌಡರ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಶಿವಲಿಂಗೇಗೌಡರು ನಮ್ಮ ಬಗ್ಗೆ ವಿಷಯ ಬಹಿರಂಗ ಪಡಿಸುತ್ತೇನೆ ಅಂತಾರೆ. ಅವರನ್ನು ತಡೆಯುತ್ತಿರುವವರು ಯಾರು? ದಾರಾಳವಾಗಿ ಬಹಿರಂಗಪಡಿಸಲಿ ಎಂದು ಹೇಳಿದ್ದಾರೆ.

ಶಿವಲಿಂಗೇಗೌಡರು ಪಕ್ಷದಲ್ಲಿ ಬೆಳೆಯುವಾಗ ನೆಲೆ ಕಂಡುಕೊಳ್ಳುವಾಗ ಕಾಣದ ಕುಟುಂಬ ರಾಜಕಾರಣ ಈಗ ಪಕ್ಷ ಬಿಟ್ಟು ಹೋಗುವಾಗ ಕಾಣುತ್ತಿದೆಯೇ? ಅವರ ಬೆದರಿಕೆಗಳಿಗೆ ಬೇರೆಯವರು ಹೆದರಬಹುದು ನಾನು ಹೆದರುವುದಿಲ್ಲ ಎಂದು ಗುಡುಗಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read