BIG NEWS: ಎಂ ಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟ ಯತ್ನ ಪ್ರಕರಣ; ಜೆಡಿಎಸ್ ಮುಖಂಡ ಅರೆಸ್ಟ್

ಬೆಂಗಳೂರು: ಎಂ‌ ಎಲ್ ಸಿ ಭೋಜೇಗೌಡ ಅವರ ಕಾರಿನ ನಂಬರ್ ಪ್ಲೇಟ್ ನಕಲಿ ಮಾಡಿ ಕದ್ದ ಕಾರು ಮಾರಾಟಕ್ಕೆ ಯತ್ನಿಸಿದ್ದ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಬೆಂಗಳೂರು ಹೈ ಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಜೆಡಿಎಸ್ ಮುಖಂಡ ಮಂಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜು ಎಂಬಾತ ಜೆಡಿಎಸ್ ಟಿಕೆಟ್ ಗಾಗಿ ಓಡಾಟ ನಡೆಸಿದ್ದ. ನಿನ್ನೆ ಮಂಜು ಎಂಬಾತ ಕೊಟ್ಟಿದ್ದ ಹೇಳಿಕೆ ಮೇರೆಗೆ ಶೋ ರೂಂ ಮಾಲೀಕ ಶಬಾಜ್ ಎಂಬಾತನನ್ನು ಬಂಧಿಸಿದ್ದರು.

ಇದೀಗ ಮಂಜುನನ್ನೇ ಬಂಧಿಸಿದ್ದು, ಆತ ಸೆಕೆಂಡ್ ಹ್ಯಾಂಡ್ ಕಾರನ್ನು ಶಬಾಜ್ ಶೋ ರೂಂ ಗೆ ಕೊಟ್ಟಿದ್ದ ಎನ್ನಲಾಗಿದೆ. ಶಬಾಜ್ ಇದೇ ರೀತಿ ನಕಲಿ ನಂಬರ್ ಪ್ಲೇಟ್ ಮಾಡಿ ಕಾರು ಮಾರಾಟ ಮಾಡುತ್ತಿದ್ದ ಎಂಬುದು ಬಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read