BIG NEWS: ಉರಿಗೌಡ, ನಂಜೇಗೌಡ ಪಾತ್ರ ಸೃಷ್ಟಿ ವಿಚಾರ; ಸಚಿವ ಮುನಿರತ್ನ ಸಿನಿಮಾ ತೆಗೆಯಲು ಸಂಶೋಧನೆ ಮಾಡಿಸಿಕೊಂಡಿರಬೇಕು; HDK ತಿರುಗೇಟು

ಹಾಸನ; ಟಿಪ್ಪು ಸುಲ್ತಾನ್ ಕೊಂದವರು ಉರಿಗೌಡ, ನಂಜೇಗೌಡ ಎಂಬ ಚರ್ಚೆ ವಿಚಾರವಾಗಿ ಸಚಿವರಾದ ಆರ್.ಅಶೋಕ್, ಅಶ್ವತ್ಥನಾರಾಯಣ ಸಂಶೋಧನೆ ಮಾಡಿ ಈ ಪಾತ್ರ ಸೃಷ್ಟಿ ಮಾಡಿದ್ದಾರೆ. ಸಚಿವ ಮುನಿರತ್ನ ಸಿನಿಮಾಗಾಗಿ ಮಾಡಿರಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಚಿವ ಮುನಿರತ್ನ ಸಿನಿಮಾ ತೆಗೆಯಲು ಈ ಪಾತ್ರಗಳ ಸಂಶೋಧನೆ ಮಾಡಿಸಿಕೊಂಡಿರಬೇಕು. ಮುನಿರತ್ನಗೆ ಒಕ್ಕಲಿಗರ ಬಗ್ಗೆ ಏನು ಗೊತ್ತು? ಎಂದು ಪ್ರಶ್ನಿಸಿದ್ದಾರೆ.

ಸಚಿವ ಮುನಿರತ್ನ ಅವರಿಗೆ ಮಂಡ್ಯ ಜಿಲ್ಲೆಯ ಒಕ್ಕಲಿಗರ ಬಗ್ಗೆ ಗೊತ್ತಿದೆಯೇ? ಸಿನಿಮಾ ತೆಗೆಯಲೆಂದು ಹೀಗೆ ಮಾಡಿರಬೇಕು ಎಂದು ತಿರುಗೇಟು ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read