ಬಳ್ಳಾರಿ, ಬೆಳಗಾವಿ ಬಳಿಕ ಬೆಂಗಳೂರಿನ ಸರದಿ: ಹೆರಿಗೆಯಾದ ಒಂದೇ ತಿಂಗಳಿಗೆ ಬಾಣಂತಿ ಸಾವು

ಬೆಂಗಳೂರು: ಬಳ್ಳಾರಿ, ಬೆಳಗಾವಿಯಲ್ಲಿ ಬಾಣಂತಿಯರ ಸಾವು ಪ್ರಕರಣದ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅನುಷಾ (24) ಮೃತ ಬಾಣಂತಿ. ತಿಂಗಳ ಹಿಂದಷ್ಟೇ ತರಿಕೆರೆಯ ರಾಜ್ ನರಸಿಂಗ್ ಹೋಂ ನಲ್ಲಿ  ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ ಇದೀಗ ಏಕಾಏಕಿ ಸಾವನ್ನಪ್ಪಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಗರ್ಜೆ ಗ್ರಾಮದ ಅನುಷಾ ಅವರಿಗೆ ಪ್ರೀ ಡೆಲಿವರಿ ಸ್ಕ್ಯಾನಿಂಗ್ ವೇಳೆ ಸ್ಟೋನ್ ಇದೆ ಎಂದು ವೈದ್ಯರು ಹೇಳಿದ್ದರು. ಅದೇ ಸ್ಕ್ಯಾನಿಂಗ್ ವರದಿ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಡೆಲಿವರಿಯಾದ ಒಂದೇ ತಿಂಗಳಿಗೆ ಅನುಷಾಳಿಗೆ ಆಪರೇಷನ್ ಮಾಡಲಾಗಿತ್ತು.

ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಅನುಷಾಳಿಗೆ ಸರ್ಜರಿ ಮಾಡಲಾಗಿತ್ತು. ಈ ವೇಳೆ ಕರುಳಿಗೆ ಡ್ಯಾಮೇಜ್ ಮಾಡಿರುವ ಆರೋಪ ಕೇಳಿಬಂದಿದೆ. ಈ ವಿಚಾರ ವೈದ್ಯರು ಮುಚ್ಚಿಟ್ಟಿದ್ದು, ಇದೇ ಕಾರಣಕ್ಕೆ ಇದೀಗ ಅನುಷಾ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read