ಸಫಾರಿ ಬಸ್ ಮೇಲೆ ಏರಿದ ಚಿರತೆ: ಕಂಗಾಲಾದ ಪ್ರವಾಸಿಗರು

ಬೆಂಗಳೂರು: ಸಫಾರಿಗೆ ಹೊರಟಿದ್ದ ವೇಳೆ ಪ್ರವಾಸಿಗರ ಬಸ್ ಮೇಲೆಯೇ ಚಿರತೆ ಏರಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ.

ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ದಿದ್ದ ವೇಳೆ ಚಿರತೆಯೊಂದು ಬಸ್ ಏರಿ ಕಿಟಕಿಯಲ್ಲಿ ಕಾಲಿಟ್ಟು ಘರ್ಜಿಸಿದೆ. ಕಿಟಕಿ ಬಳಿ ಚಿರತೆ ಕಂಡು ಪ್ರವಾಸಿಗರಿಗೆ ಜೀವವೇ ಕೈಗೆ ಬಂದಂತಾಗಿದೆ.

ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆ ಚಿರತೆ ಬಸ್ ನಿಂದ ಕೆಳಗಿಳಿದು ಹೋಗಿದೆ. ಸಫಾರಿ ವೇಳೆ ಚಿರತೆ ಒಮ್ಮೆಲೆ ಬಸ್ ಏರಿದ್ದು ಕಂಡು ಕ್ಷಣಕಾಲ ಪ್ರವಾಸಿಗರು ಆತಂಕ್ಕೀಡಾದರೂ ಸಂತಸ ಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read