BREAKING: ಬಂಡೀಪುರಕ್ಕೆ ಬಂದಿದ್ದ ದಂಪತಿ, ಪುತ್ರ ನಾಪತ್ತೆ: ರೆಸಾರ್ಟ್ ನಿಂದ ಕುಟುಂಬದ ಅಪಹರಣ ಶಂಕೆ

ಚಾಮರಾಜನಗರ: ಬಂಡಿಪುರಕ್ಕೆ ಬಂದಿದ್ದ ದಂಪತಿ ಮತ್ತು 10 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಬಂದಿದ್ದ ಕುಟುಂಬ ರೆಸಾರ್ಟ್ ನಲ್ಲಿ ಭಾನುವಾರ ರಾತ್ರಿ ವಾಸ್ತವ್ಯ ಹೂಡಿತ್ತು.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ಕಂಟ್ರಿ ಕ್ಲಬ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ಸೋಮವಾರ ಮಧ್ಯಾಹ್ನ ಕುಟುಂಬವನ್ನು ಅಪಹರಣ ಮಾಡಿದ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಮೂಲದ ಜೆ. ನಿಶಾಂತ್(40) ಮತ್ತು ಅವರ ಪತ್ನಿ, ಪುತ್ರ ನಾಪತ್ತೆಯಾಗಿದ್ದಾರೆ.

ಕಂಟ್ರಿ ಕ್ಲಬ್ ರೆಸಾರ್ಟ್ ನಲ್ಲಿ ಜೆ. ನಿಶಾಂತ್ ಅವರ ಲಗೇಜ್ ಇದೆ. ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ. ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read