BIG NEWS : ಬೆಂಗಳೂರಲ್ಲಿ ‘ಗಣೇಶ ಮೂರ್ತಿ’ ವಿಸರ್ಜನೆ ಹಿನ್ನೆಲೆ ; ಈ ರಸ್ತೆಗಳಲ್ಲಿ 2 ದಿನ ವಾಹನ ಸಂಚಾರ ನಿಷೇಧ.!

ಬೆಂಗಳೂರು : ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆ ನಗರದ ಈ ರಸ್ತೆಗಳಲ್ಲಿ 3 ದಿನ ವಾಹನ ಸಂಚಾರ ನಿಷೇಧಿಸಲಾಗಿದೆ.

ದಿನಾಂಕ: 29.08.2025 ಮತ್ತು 31.08.2025 ರಂದು ಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಐತಿಹಾಸಿಕ ಯಡಿಯೂರು ಕೆರೆಯಲ್ಲಿ ಬೆಂಗಳೂರು ನಗರದ ವಿವಿಧ ಭಾಗಗಳಿಂದ ಗಣೇಶ ಮೂರ್ತಿ ವಿಸರ್ಜನೆಗೆ ಅಪಾರ ಸಂಖ್ಯೆಯ ಸಾರ್ವಜನಿಕರು, ಭಕ್ತಾದಿಗಳು, ಆಗಮಿಸುವುದರಿಂದ 2 ದಿನ ಮಧ್ಯಾಹ್ನ 3.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ ಕನಕಪುರ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆಯುಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕನಕಪುರ ಮುಖ್ಯ ರಸ್ತೆಯಲ್ಲಿ ದೈನಂದಿನ ಸಾರ್ವಜನಿಕ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಈ ಸಂಬಂಧವಾಗಿ ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿದ್ದು ಪರ್ಯಾಯ ರಸ್ತೆಗಳನ್ನು ಬಳಸಲು ಕೋರಿದೆ.

ತಾತ್ಕಾಲಿಕ ಸಂಚಾರ ನಿರ್ಬಂಧ :-

  • ಕನಕಪುರ ಮುಖ್ಯ ರಸ್ತೆಯ ಯಡಿಯೂರು ಹೆರಿಗೆ ಆಸ್ಪತ್ರೆ ಜಂಕ್ಷನ್ ನಿಂದ ಯಡಿಯೂರು ಸೌತ್ ಎಂಡ್ ರಸ್ತೆ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಿದೆ.
    ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು :-
  • ತಾತ್ಕಾಲಿಕವಾಗಿ ನಿರ್ಬಂಧಿಸಿರುವ ರಸ್ತೆಗೆ ಬನಶಂಕರಿ ಕಡೆಯಿಂದ ಮಾರ್ಕೇಟ್ ಕಡೆಗೆ ಸಂಚರಿಸುವ ವಾಹನಗಳು ಯಡಿಯೂರು ಹೆರಿಗೆ ಆಸ್ಪತ್ರೆ ಜಂಕ್ಷನ್ -ಬಲ ತಿರುವು-32ನೇ ಕ್ರಾಸ್ ರಸ್ತೆ – 2ನೇ ಮುಖ್ಯ ರಸ್ತೆ 32ನೇ ಕ್ರಾಸ್ ಜಂಕ್ಷನ್ – 04ನೇ ಮುಖ್ಯ ರಸ್ತೆ 32ನೇ ಕ್ರಾಸ್ ಜಂಕ್ಷನ್ – ಎಡ ತಿರುವು – 27ನೇ ಕ್ರಾಸ್ ಜಂಕ್ಷನ್ – ಸೌತ್ ಎಂಡ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿರುತ್ತದೆ.
  • ಮಾರ್ಕೇಟ್ ಕಡೆಯಿಂದ ಬನಶಂಕರಿ ಕಡೆಗೆ ಸಂಚರಿಸುವ ವಾಹನಗಳು ಯಡಿಯೂರು ಸೌತ್ ಎಂಡ್ ರಸ್ತೆ, ಜಂಕ್ಷನ್ -ಎಡ ತಿರುವು- ಸೌತ್ ಎಂಡ್ ರಸ್ತೆ- ಸೌತ್ ಎಂಡ್ ಸರ್ಕಲ್ – ಬಲ ತಿರುವು ಪಡೆದು ಮುಂದಕ್ಕೆ ಸಂಚರಿಸಬಹುದಾಗಿರುತ್ತದೆ.
    ತಾತ್ಕಾಲಿಕವಾಗಿ ವಾಹನ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ :-
  • ಕನಕಪುರ ಮುಖ್ಯ ರಸ್ತೆ (ಯಡಿಯೂರು ಹೆರಿಗೆ ಆಸ್ಪತ್ರೆ ಜಂಕ್ಷನ್ ನಿಂದ ಯಡಿಯೂರು ಸೌತ್ ಎಂಡ್ ರಸ್ತೆ, ಜಂಕ್ಷನ್ ವರೆಗೆ)
  • ಕೆ.ಆರ್.ರಸ್ತೆ
  • 32ನೇ ಕ್ರಾಸ್ ರಸ್ತೆ
  • 04ನೇ ಮುಖ್ಯ ರಸ್ತೆ
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read