BREAKING : ನಾಳೆ ‘ಖಗ್ರಾಸ ಚಂದ್ರಗ್ರಹಣ’ ಹಿನ್ನೆಲೆ : ರಾಜ್ಯದ ಬಹುತೇಕ ದೇವಸ್ಥಾನಗಳು ಕ್ಲೋಸ್.!

ಬೆಂಗಳೂರು : ನಾಳೆ ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಭಾರತದಲ್ಲಿ ಕೂಡ ಚಂದ್ರಗ್ರಹಣ ಗೋಚರವಾಗಲಿದೆ. ಚಂದ್ರಗ್ರಹಣ ಇರುವ ಹಿನ್ನೆಲೆ ರಾಜ್ಯದ ಬಹುತೇಕ ದೇವಸ್ಥಾನಗಳು ನಾಳೆ ಕ್ಲೋಸ್ ಆಗಲಿದೆ.

ಬೆಂಗಳೂರು ನಗರದ ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇಗುಲ ನಾಳೆ ಬೆಳಗ್ಗೆಯಿಂದಲೇ ಬಂದ್ ಆಗಲಿದೆ. ಶಿವನಿಗೆ ಅಭಿಷೇಕ ನೆರವೇರಿಸಿ ಬೆಳಗ್ಗೆ 11 ಗಂಟೆಗೆ ದೇಗುಲ ಕ್ಲೋಸ್ ಮಾಡಲಾಗುತ್ತದೆ.

ನಗರದ ಬಂಡೆ ಮಹಾಕಾಳಿ ದೇವಾಲಯ ಕೂಡ ಇಂದು ರಾತ್ರಿ 8:30 ಕ್ಕೆ ಬಂದ್ ಆಗುತ್ತದೆ. ಸೋಮವಾರ ಬೆಳಗ್ಗೆ ಶುದ್ದಿಕಾರ್ಯದ ಬಳಿಕ 6 ಗಂಟೆಗೆ ಮತ್ತೆ ದೇಗುಲ ಓಪನ್ ಮಾಡಲಾಗುತ್ತದೆ.

ನಿತ್ಯದ ಸೇವೆ, ದರ್ಶನ ಸೇವಾ ಸಮಯದಲ್ಲಿ ವ್ಯತ್ಯಯ

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೆಪ್ಟೆಂಬರ್ 7ರಂದು ಭಾನುವಾರ ಚಂದ್ರಗ್ರಹಣ ಇರುವುದರಿಂದ ನಿತ್ಯದ ಸೇವೆ, ದರ್ಶನ ಸೇವಾ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ. ಅಂದು ಮಧ್ಯಾಹ್ನದ ಮಹಾಪೂಜೆ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ರಾತ್ರಿಯ ಮಹಾಪೂಜೆ ಸಂಜೆ 5 ಗಂಟೆಗೆ ನೆರವೇರಿಸಲಾಗುವುದು. ರಾತ್ರಿ ಭೋಜನ ಪ್ರಸಾದ ಇರುವುದಿಲ್ಲ. ಸಾಯಂಕಾಲದ ಆಶ್ಲೇಷ ಬಲಿ ಸೇವೆಯೂ ಇರುವುದಿಲ್ಲ. ಶನಿವಾರ ಆರಂಭವಾದ ಸರ್ಪ ಸಂಸ್ಕಾರ ಸೇವೆ ಭಾನುವಾರ ಕೊನೆಯಾಗಲಿದೆ. ಭಾನುವಾರ ಸೇವೆ ಆರಂಭವಾಗುವುದಿಲ್ಲ. ಸಂಜೆ 5ರಿಂದ ದೇವರ ದರ್ಶನ ಇರುವುದಿಲ್ಲ. ಸೆ. 8ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read