ಪಾಕ್ ದುಸ್ಸಾಹಸಕ್ಕೆ ಭಾರತದ ದಿಟ್ಟ ಉತ್ತರ ; ಕ್ಷಿಪಣಿಗಳನ್ನು ಹೊಡೆದುರುಳಿಸಿದ ಸೇನೆ | Watch Video

ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನದ ಕಡೆಯಿಂದ ಉಂಟಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಭಾರತೀಯ ಸಶಸ್ತ್ರ ಪಡೆಗಳ ಕೆಚ್ಚೆದೆಯ ಕಾರ್ಯಕ್ಕೆ ಬಾಲಿವುಡ್ ನಟ ಅನುಪಮ್ ಖೇರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಮೇ 8 ರಂದು ಪಾಕಿಸ್ತಾನವು ಜಮ್ಮು, ಜೈಸಲ್ಮೇರ್ ಸೇರಿದಂತೆ ಹಲವು ಗಡಿ ಜಿಲ್ಲೆಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ಹಾರಿಸಿದ ಕ್ಷಿಪಣಿಗಳನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ತಡೆದು ನಾಶಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅನುಪಮ್ ಖೇರ್, ಭಾರತೀಯ ಪ್ರತಿರೋಧ ಕ್ಷಿಪಣಿಯು ಪಾಕಿಸ್ತಾನದ ಕ್ಷಿಪಣಿಯನ್ನು ಹೊಡೆದುರುಳಿಸುವ ದೃಶ್ಯದ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಜಮ್ಮುವಿನಲ್ಲಿರುವ ತಮ್ಮ ಸೋದರ ಸಂಬಂಧಿ ನೀಡಿದ ಧೈರ್ಯ ತುಂಬುವ ಸಂದೇಶವನ್ನು ಸಹ ಅವರು ಹಂಚಿಕೊಂಡಿದ್ದಾರೆ.

ತಮ್ಮ ಸಹೋದರ ಸುನೀಲ್ ಖೇರ್ ಅವರೊಂದಿಗೆ ಮಾತನಾಡಿದ ನಂತರ, ಅನುಪಮ್ ಖೇರ್, ಟ್ವೀಟ್ ಮಾಡಿದ್ದು, “ನಾವು ಭಾರತದಲ್ಲಿದ್ದೇವೆ. ನಾವು ಹಿಂದೂಸ್ತಾನಿಗಳು. ಭಾರತೀಯ ಸೇನೆ ಮತ್ತು ಮಾತಾ ವೈಷ್ಣೋ ದೇವಿ ನಮ್ಮನ್ನು ರಕ್ಷಿಸುತ್ತಿದ್ದಾರೆ. ನೀವು ಚಿಂತೆ ಮಾಡಬೇಡಿ. ಭಾರತೀಯ ಸಶಸ್ತ್ರ ಪಡೆಗಳು ಯಾವುದೇ ಕ್ಷಿಪಣಿಗಳನ್ನು ನೆಲಕ್ಕೆ ಬೀಳಲು ಬಿಡುವುದಿಲ್ಲ. ಜೈ ಮಾತಾ ದಿ! ಜೈ ಹಿಂದ್!” ಎಂದು ಸಹೋದರ ಹೇಳಿದ ಸಂದೇಶ ಬರೆದುಕೊಂಡಿದ್ದಾರೆ. ಈ ಸಂದೇಶವು ಭಾರತೀಯ ಸೇನೆಯ ಮೇಲಿನ ಜನರ ನಂಬಿಕೆ ಮತ್ತು ಹೆಮ್ಮೆಯನ್ನು ಎತ್ತಿ ತೋರಿಸುತ್ತದೆ.

ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮತ್ತು ವಾಯುಸೇನೆಯು “ಆಪರೇಷನ್ ಸಿಂಧೂರ್” ಅನ್ನು ಪ್ರಾರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಲಾಗಿದ್ದು, 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಅನುಪಮ್ ಖೇರ್, “ಆಪರೇಷನ್ ಸಿಂಧೂರ್ ನಮ್ಮ ದೇಶಕ್ಕೆ ಭಯೋತ್ಪಾದನೆಯನ್ನು ತರಲು ಪ್ರಯತ್ನಿಸುವವರಿಗೆ ತಕ್ಕ ಪ್ರತ್ಯುತ್ತರವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ನಮ್ಮ ನಾಗರಿಕರು ಬೆಳಿಗ್ಗೆ ಎದ್ದಾಗ ಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ. ಅಲ್ಲದೆ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಎಂಬ ಇಬ್ಬರು ಮಹಿಳಾ ಅಧಿಕಾರಿಗಳು ಆಪರೇಷನ್ ಸಿಂಧೂರ್ ಬಗ್ಗೆ ಅಧಿಕೃತ ಮಾಧ್ಯಮ ಗೋಷ್ಠಿ ನೀಡಿದಾಗ ನನ್ನ ಎದೆ ಹೆಮ್ಮೆಯಿಂದ ಹಿಗ್ಗಿತು” ಎಂದು ಹೇಳಿದ್ದಾರೆ.

“ನಮ್ಮ ನಾಗರಿಕರು ದೇಶಕ್ಕಾಗಿ ಸ್ವಲ್ಪವಾದರೂ ಮಾಡುವುದು ಬಹಳ ಮುಖ್ಯ. ನಮ್ಮನ್ನು ಸುರಕ್ಷಿತವಾಗಿರಿಸುವ ಸಶಸ್ತ್ರ ಪಡೆಗಳಿಗೆ ವಂದನೆಗಳು. ಅವರು ನಮಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡುತ್ತಾರೆ. ನಾವು ಅವರಿಗೆ ಧನ್ಯವಾದ ಹೇಳಬೇಕು. ಪ್ರಧಾನಿ ಮೋದಿಯವರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. 1962 ರ ಯುದ್ಧವಾಗಲಿ ಅಥವಾ 1965 ರ ಯುದ್ಧವಾಗಲಿ, ನಾನು ನನ್ನ ಜೀವನದಲ್ಲಿ ಅನೇಕ ಯುದ್ಧಗಳನ್ನು ನೋಡಿದ್ದೇನೆ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ಯಾವಾಗಲೂ ವಂದನೆ ಸಲ್ಲಿಸಲು ಬಯಸುತ್ತೇನೆ. ಜೈ ಹಿಂದ್, ಜೈ ಭಾರತ್” ಎಂದು ಅವರು ಸೇರಿಸಿದ್ದಾರೆ.

ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು, ವಿವೇಕವನ್ನು ಪ್ರದರ್ಶಿಸಬೇಕು ಮತ್ತು ದೇಶದೊಂದಿಗೆ ನಿಲ್ಲಬೇಕು ಎಂದು ಅನುಪಮ್ ಖೇರ್ ಕರೆ ನೀಡಿದ್ದಾರೆ. ನಮ್ಮ ಸೇನೆ ತನ್ನ ಕೆಲಸವನ್ನು ಮಾಡುತ್ತಿದೆ, ನಾವೂ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಎಂದು ಅವರು ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read