BIG NEWS: ಯುವರಾಜ್ ಸ್ವಾಮಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಭಾರಿ ಸುದ್ದಿಯಾಗಿ ಜೈಲು ಸೇರಿದ್ದ ಯುವರಾಜ್ ಸ್ವಾಮಿ ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.

ಗೋವಿಂದಯ್ಯ ಎಂಬುವವರು ಯುವರಾಜ್ ಸ್ವಾಮಿ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ 30 ಲಕ್ಷ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಗೋವಿಂದಯ್ಯ ಅಳಿಯನಿಗೆ ಕೆಲಸ ಕೊಡುವುದಾಗಿ ಹೇಳಿ 30 ಲಕ್ಷ ರೂಪಾಯಿ ಹಣವನ್ನು ಯುವರಾಜ್ ತೆಗೆದುಕೊಂಡಿದ್ದರು. ಆದರೆ ಕೆಲಸವನ್ನೂ ಕೊಡದೇ ಹಣವನ್ನೂ ವಾಪಸ್ ಕೊಡದೇ ಮೋಸ ಮಾಡಿದ್ದಾರೆ ಎಂದು ಗೋವಿಂದರಾಜ್ ಆರೊಪಿಸಿದ್ದಾರೆ. ಈ ಬಗ್ಗೆ ಗೋವಿಂದಯ್ಯ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೋರ್ಟ್ ಮೆಟ್ತಿಲೇರಿತ್ತು. ಆದರೆ ಯುವರಾಜ್ ರಾಜಿ ಮಾಡಿಕೊಳ್ಳೋಣ 30 ಲಕ್ಷ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿ ಕೋರ್ಟ್ ಬಳಿ 10 ಲಕ್ಷ ಹಾಗೂ 5 ಲಕ್ಷದ 2 ಚೆಕ್ ಕೊಟ್ಟಿದ್ದರಂತೆ. ಕೇಸ್ ವಾಪಸ್ ಪಡೆಯುವಂತೆಯೂ ಹೇಳಿದ್ದರಂತೆ.

ಆದರೆ ಕೆಲ ದಿನಗಳಲ್ಲಿ ಯುವರಾಜ್ ಕೊಟ್ಟಿದ್ದ 2 ಚೆಕ್ ಗಳು ಬೌನ್ಸ್ ಆಗಿವೆ. ಈ ಹಿನ್ನೆಲೆಯಲ್ಲಿ ಗೋವಿಂದಯ್ಯ, ಯುವರಾಜ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ವಂಚನೆ ಕೇಸ್ ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read