ಆಂಧ್ರಪ್ರದೇಶ ರೈಲು ದುರಂತ ಪ್ರಕರಣ: ಅಪಘಾತದ ಹಿಂದಿನ ಕಾರಣ ಬಹಿರಂಗ….!

ಆಂಧ್ರಪ್ರದೇಶದಲ್ಲಿ ಸಂಭವಿಸಿದ ರೈಲು ದುರಂತಕ್ಕೆ ಲೋಕೋ ಪೈಲಟ್​ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು ಕೆಂಪು ಸಿಗ್ನಲ್​ ಜಂಪ್​ ಮಾಡಿದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.

ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಕೊತವಲಸ ರೈಲು ನಿಲ್ದಾಣದ ಬಳಿ ವಿಶಾಖಪಟ್ಟಣಂ – ಪಲಾಸ ಪ್ಯಾಸೆಂಜರ್​ ರೈಲಿಗೆ ಡಿಕ್ಕಿ ಹೊಡೆದ ವಿಶಾಖಪಟ್ಟಣಂನಿಂದ ರಾಯಗಡಕ್ಕೆ ಪ್ರಯಾಣಿಸುತ್ತಿದ್ದ ರೈಲು ಹಳಿ ತಪ್ಪಿದ ಪರಿಣಾಮ 10 ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು.

ಜೂನ್​ 2ರಂದು ಓಡಿಶಾದ ಬಾಲಸೋರ್​ನಲ್ಲಿ ಕೋರಮಂಡಲ್​ ಎಕ್ಸ್​ಪ್ರೆಸ್​ ಸರಕು ರೈಲಿಗೆ ಡಿಕ್ಕಿ ಹೊಡೆದ ಬಳಿಕ ನಡೆದ ಮೂರನೇ ರೈಲು ದುರಂತ ಇದಾಗಿದೆ. ಆ ದುರಂತದಲ್ಲಿ 296 ಮಂದಿ ಜೀವ ಕಳೆದುಕೊಂಡಿದ್ದರು ಹಾಗೂ 1200 ಮಂದಿ ಗಾಯಗೊಂಡಿದ್ದರು. ಅಕ್ಟೋಬರ್​ 11ರಂದು ಬಿಹಾರದ ಬಕ್ಸರ್​ನಲ್ಲಿ ದೆಹಲಿಯ ಎಕ್ಸ್​ಪ್ರೆಸ್​ ಹಳಿ ತಪ್ಪಿದ ಪರಿಣಾಮ ಐವರು ಸಾವನ್ನಪ್ಪಿದ್ದರು ಹಾಗೂ 30 ಮಂದಿ ಗಾಯಗೊಂಡಿದ್ದರು. ವಿಶಾಖಪಟ್ಟಣಂ-ಪಲಾಸ ರೈಲು ಮುಖ್ಯ ಹಳಿಯಿಂದ ಸೈಡ್ ಟ್ರ್ಯಾಕ್‌ಗೆ ಬದಲಾಯಿಸುವಾಗ ಭಾನುವಾರ ಅಪಘಾತ ಸಂಭವಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read