ಬಿಗ್‌ ಬಿ​, ಸಚಿನ್​ ತೆಂಡೂಲ್ಕರ್​ ಬಳಿಕ ರಜನಿಕಾಂತ್ ​ಗೂ ಬಂತು ಈ​ ಆಹ್ವಾನ !

ಅಮಿತಾಬ್​ ಬಚ್ಛನ್​ ಹಾಗೂ ಸಚಿನ್​ ತೆಂಡೂಲ್ಕರ್​ ಬಳಿಕ 2023ನೇ ಸಾಲಿನ ಐಸಿಸಿ ಕ್ರಿಕೆಟ್​ ವಿಶ್ವಕಪ್​​ ಪಂದ್ಯಾವಳಿಗಾಗಿ ತಲೈವಾ ರಜಿನಿಕಾಂತ್​​ರಿಗೆ ಗೋಲ್ಡನ್​ ಟಿಕೆಟ್​ ನೀಡಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಆಹ್ವಾನ ನೀಡಿದ್ದಾರೆ.

ವರ್ಚಸ್ಸಿನ ನಿಜವಾದ ಮೂರ್ತರೂಪ ಹಾಗೂ ಸಿನಿಮೀಯ ತೇಜಸ್ಸು ಆಗಿರುವ ನಟನಿಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಟಿಕೆಟ್​ ನೀಡಿದರು ಎಂದು ಎಕ್ಸ್​​ನಲ್ಲಿ ಈ ಫೋಟೋವನ್ನು ಶೇರ್​ ಮಾಡಲಾಗಿದೆ. ಜಯ್​ ಶಾ, ರಜನಿಕಾಂತ್​​ರಿಗೆ ಟಿಕೆಟ್​ ನೀಡುತ್ತಿರೋದನ್ನು ಈ ಫೋಟೋದಲ್ಲಿ ಕಾಣಬಹುದಾಗಿದೆ.

ಅಮಿತಾಬ್​ ಬಚ್ಛನ್​ ಹಾಗೂ ಸಚಿನ್​ ತೆಂಡೂಲ್ಕರ್​ರಿಗೂ ಬಿಸಿಸಿಐ ಇದೇ ರೀತಿ ಗೌರವಪೂರ್ವಕವಾಗಿ ಗೋಲ್ಡನ್​ ಟಿಕೆಟ್​ ನೀಡಿ ಪಂದ್ಯಕ್ಕೆ ಆಹ್ವಾನಿಸಿದೆ. 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತವು ಅಕ್ಟೋಬರ್ 5 ರಿಂದ ನವೆಂಬರ್ 19, 2023 ರವರೆಗೆ ಆಯೋಜಿಸಲಿದೆ.

ಪಂದ್ಯಾವಳಿಯು ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹತ್ತು ತಂಡಗಳನ್ನು ಒಳಗೊಂಡಿರುತ್ತದೆ.

https://twitter.com/BCCI/status/1704038875625095315?ref_src=twsrc%5Etfw%7Ctwcamp%5Etweetembed%7Ctwterm%5E1704038875625095315%7Ctwgr%5E3b4e3d35627760c6aa393f149917baae5d178885%7Ctwcon%5Es1_&ref_url=https%3A%2F%2Fsportstar.thehindu.com%2Fcricket%2Frajnikanth-odi-world-cup-golden-ticket-jay-shah-bcci-secretary%2Farticle67321978.ece

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read