ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟ ‘ರಾಜ್ ಬಿ ಶೆಟ್ಟಿ’

ಸ್ಯಾಂಡಲ್ ವುಡ್ ನಲ್ಲಿ ‘ಒಂದು ಮೊಟ್ಟೆಯ ಕಥೆ’ ಹೇಳಿದ್ದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾರೆ.

ಹೌದು, ಜೂನ್ 13 ರಂದು ಬೆಳಗ್ಗೆ 11 ಗಂಟೆಗೆ  ತಮ್ಮ ಹೊಸ ಸಿನಿಮಾದ ಬಗ್ಗೆ ರಾಜ್ ಬಿ  ಶೆಟ್ಟಿ ಅನೌನ್ಸ್ ಮಾಡಲಿದ್ದಾರೆ. ಸಿನಿಮಾ ಯಾವುದು, ಕಥೆ ಏನು..? ನಟ, ನಟಿಯರು ಯಾರು ಎಂಬ ಕುತೂಹಲದ ಪ್ರಶ್ನೆಗೆ ಅಂದೇ ಶೆಟ್ಟರು ಉತ್ತರ ನೀಡಲಿದ್ದಾರೆ.

ಹೊಸದೊಂದು ಪಾತ್ರದ ಮೂಲಕ, ವಿಭಿನ್ನ ಕಥೆಯ ಮೂಲಕ ನಟ ರಾಜ್ ಬಿ ಶೆಟ್ಟಿ ಪ್ರೇಕ್ಷಕರ ಎದುರು ಬರಲಿದ್ದು, ಸಿನಿಮಾದ ಬಗ್ಗೆ ಬಹಳ ಕುತೂಹಲವಿದೆ. ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನ ದೈತ್ಯ ಪ್ರತಿಭೆಯಾಗಿ ಗುರುತಿಸಿಕೊಂಡ ನಟನಿಗೆ ಒಳ್ಳೆಯ ಫ್ಯೂಚರ್ ಇದೆ ಎಂಬ ಮಾತು  ಕೇಳಿಬರುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read