‘ಅಂಬಿ’ ಪುತ್ರನ ಬೀಗರೂಟಕ್ಕೆ ಹರಿದು ಬಂದ ಜನಸಾಗರ : ಭರ್ಜರಿ ಬಾಡೂಟ ಸವಿದ ಅಭಿಮಾನಿಗಳು

ಮಂಡ್ಯ : ಅಂಬರೀಷ್ ಪುತ್ರ ಅಭಿಷೇಕ್ ಹಾಗೂ ಅವಿವಾ ಮದುವೆಯ ಬೀಗರೂಟ ಇಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ನಡೆದಿದ್ದು, ಜನಸಾಗರವೇ ಹರಿದು ಬಂದಿದೆ.

ಬಾಡೂಟ ಸವಿಯಲು ಜನಸಾಗರವೇ ಹರಿದು ಬಂದಿದ್ದು, ನೂಕು ನುಗ್ಗಲು ಉಂಟಾದ ಘಟನೆ ಕೂಡ ನಡೆದಿದೆ. ಈ ವೇಳೆ ಪೊಲೀಸರು ಲಘು ಲಾಠಿ ಕೂಡ ಬೀಸಿದ್ದಾರೆ. 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಬೀಗರೂಟಕ್ಕೆ ಮುಗಿಬಿದ್ದಿದ್ದರು.

ಬೀಗರೂಟದಲ್ಲಿ ಮಟನ್ ಬಿರಿಯಾನಿ, ನಾಟಿ ಕೋಳಿ, ಮೊಟ್ಟೆ, ಚಿಕನ್ ಕಬಾಬ್ ಮುದ್ದೆ, ಬೋಟಿ ಗೊಜ್ಜು ಸೇರಿದಂತೆ ಹಲವು ಭಕ್ಷ್ಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು. .ಅಲ್ಲದೇ ಸುಮಾರು 5000 ಮಂದಿಗೆ ಹೋಳಿಗೆಯ ವೆಜ್ ಊಟ ಹಾಕಿಸಲಾಗಿದೆ. ಇಷ್ಟೊಂದು ಜನರನ್ನು ನೋಡಿದ ಅವಿವಾ ಕೂಡ ಶಾಕ್ ಆಗಿದ್ದರು ಎಂದು ಅಭಿಷೇಕ್ ಅಂಬರೀಷ್ ಹೇಳಿದ್ದಾರೆ. ಗೆಜ್ಜಲಗೆರೆಯ 15 ಎಕರೆ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read