ಅಸ್ಸಾಂ : ಅಸ್ಸಾಂನಲ್ಲಿ ಘೋರ ದುರಂತ ಸಂಭವಿಸಿದ್ದು, ನಾಡದೋಣಿ ಮುಳುಗಿ ವಿದ್ಯಾರ್ಥಿಗಳು ಸೇರಿ ಐವರು ಜಲಸಮಾಧಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ಬೆಳಗಿನ ಜಾವ ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಸುತ್ತಿದ್ದ ದೋಣಿ ಪಲ್ಟಿಯಾಗಿದೆ. ವಿದ್ಯಾರ್ಥಿಗಳು ಸೇರಿ ಐವರು ಜಲಸಮಾಧಿಯಾಗಿದ್ದಾರೆ .
ಪೆರಾಧೋರಾ ಘಾಟ್ನಿಂದ ನಲ್ಬರಿ ಜಿಲ್ಲೆಯ ಲಾರ್ಕುಚಿ ಘಾಟ್ಗೆ ದೋಣಿ ಸಾಗುತ್ತಿತ್ತು. ಗೋಫುಲ್ ಅಲಿ (50), 3 ನೇ ತರಗತಿ ವಿದ್ಯಾರ್ಥಿ ಆರ್ಯನ್ ಅಲಿ (8) ಮತ್ತು ರಾಂಪುರ ಜನತಾ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಮಜಿದುಲ್ ಇಸ್ಲಾಂ (15) ಸೇರಿ ಐವರು ಮೃತಪಟ್ಟಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತರ ಶವಗಳನ್ನು ಹೊರತೆಗೆದಿದೆ.
You Might Also Like
TAGGED:ಅಸ್ಸಾಂ