BREAKING : ಅಸ್ಸಾಂನಲ್ಲಿ ಘೋರ ದುರಂತ : ‘ನಾಡದೋಣಿ’ ಮುಳುಗಿ ವಿದ್ಯಾರ್ಥಿಗಳು ಸೇರಿ ಐವರು ಜಲಸಮಾಧಿ.!

ಅಸ್ಸಾಂ : ಅಸ್ಸಾಂನಲ್ಲಿ ಘೋರ ದುರಂತ ಸಂಭವಿಸಿದ್ದು, ನಾಡದೋಣಿ ಮುಳುಗಿ ವಿದ್ಯಾರ್ಥಿಗಳು ಸೇರಿ ಐವರು ಜಲಸಮಾಧಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಬೆಳಗಿನ ಜಾವ ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಸುತ್ತಿದ್ದ ದೋಣಿ ಪಲ್ಟಿಯಾಗಿದೆ. ವಿದ್ಯಾರ್ಥಿಗಳು ಸೇರಿ ಐವರು ಜಲಸಮಾಧಿಯಾಗಿದ್ದಾರೆ .

ಪೆರಾಧೋರಾ ಘಾಟ್ನಿಂದ ನಲ್ಬರಿ ಜಿಲ್ಲೆಯ ಲಾರ್ಕುಚಿ ಘಾಟ್ಗೆ ದೋಣಿ ಸಾಗುತ್ತಿತ್ತು. ಗೋಫುಲ್ ಅಲಿ (50), 3 ನೇ ತರಗತಿ ವಿದ್ಯಾರ್ಥಿ ಆರ್ಯನ್ ಅಲಿ (8) ಮತ್ತು ರಾಂಪುರ ಜನತಾ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಮಜಿದುಲ್ ಇಸ್ಲಾಂ (15) ಸೇರಿ ಐವರು ಮೃತಪಟ್ಟಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತರ ಶವಗಳನ್ನು ಹೊರತೆಗೆದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read