alex Certify ಪವಿತ್ರಾ ಗೌಡಗೆ ಬರೋಬ್ಬರಿ 2 ಕೋಟಿ ಹಣ ನೀಡಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್: ಏನಿದು ಟ್ವಿಸ್ಟ್? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪವಿತ್ರಾ ಗೌಡಗೆ ಬರೋಬ್ಬರಿ 2 ಕೋಟಿ ಹಣ ನೀಡಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್: ಏನಿದು ಟ್ವಿಸ್ಟ್?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡಗೆ ನಿರ್ಮಾಪಕ ದಿ.ಸೌಂದರ್ಯ ಜಗದೀಶ್ ಬರೋಬ್ಬರಿ 2 ಕೋಟಿ ರೂಪಾಯಿ ಹಣ ನೀಡಿದ್ದಾರೆ ಎಂಬ ವಿಚಾರ ಇದೀಗ ಬಯಲಾಗಿದೆ.

ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕ ಸೌಂದರ್ಯ ಜಗದೀಶ್, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು. ಸೌಂದರ್ಯ ಜಗದೀಶ್ ಮೃತಪಟ್ಟ ಒಂದು ತಿಂಗಳ ಬಳಿಕ ಅವರ ಪತ್ನಿ, ಮನೆಯಲ್ಲಿ ಸೌಂದರ್ಯ ಜಗದೀಶ್ ಬಟ್ಟೆಯಲ್ಲಿ ಒಂದು ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ವ್ಯವಹಾರದಲ್ಲಿ 60 ಕೋಟಿ ನಷ್ಟವುಂಟಾಗಿದೆ. ಸುರೇಶ್ ಸೇರಿದಂತೆ ನಾಲ್ವರು ಪಾರ್ಟನರ್ ಗಳಿಂದ 60 ಕೋಟಿ ಮೋಸವಾಗಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿರುವುದಾಗಿ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ದೂರು ನೀಡಿದ್ದರು.

ಇದೀಗ ಸೌಂದರ್ಯ ಜಗದೀಶ್ ಅವರ ಪಾರ್ಟನರ್ ಗಳಲ್ಲಿ ಒಬ್ಬನಾಗಿರುವ ಸುರೇಶ್ ಎಂಬುವವರು, 60 ಕೋಟಿ ಹಣವನ್ನು ನಾವೇ ನಷ್ಟವುಂಟುಮಾಡಿಲ್ಲ. ಸೌಂದರ್ಯ ಜಗದೀಶ್ ಬೇರೆ ಬೇರೆ ವ್ಯಕ್ತಿಗಳಿಗೆ ಕೆಲವು ಹಣಗಳನ್ನು ನೀಡಿದ್ದರು. ಅದರಲ್ಲಿ ನಟಿ ಪವಿತ್ರಾ ಗೌಡಗೆ 2 ಕೋಟಿ ಹಣ ನೀಡಿದ್ದರು ಎಂದು ಪೊಲೀಸರಿಗೆ ದಾಖಲೆ ಸಮೀತ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸೌಂದರ್ಯ ಜಗದೀಶ್ ಅಕೌಂಟ್ ನಿಂದಲೇ ಎರಡು ಬಾರಿ ಒಂದೊಂದು ಕೋಟಿಯಂತೆ ಪವಿತ್ರಾ ಗೌಡಗೆ ಹಣ ವರ್ಗಾವಣೆಯಾಗಿದೆ. 2017ರ ನವೆಂಬರ್ ನಲ್ಲಿ ಪವಿತ್ರಾಗೆ 1 ಕೋಟಿ ಹಣ ಟ್ರಾನ್ಸ್ಫರ್ ಆಗಿದೆ. ಬಳಿಕ 2018ರ ಜನವರಿಯಲ್ಲಿ 1 ಕೋಟಿ ಹಣ ವರ್ಗಾವಣೆಯಾಗಿದೆ. ನಂತರದಲ್ಲಿ ಕೆ.ರಾಮಮೂರ್ತಿ ಎಂಬುವವರಿಂದ ಪವಿತ್ರಾ ಗೌಡ ಮನೆ ಖರೀದಿಸಿದ್ದರು. 2 ಕೋಟಿ ಹಣವನ್ನು ಸೌಂದರ್ಯ ಜಗದೀಶ್ ಸಾಲವಾಗಿ ಪವಿತ್ರಾ ಗೌಡಗೆ ಕೊಟ್ಟಿದ್ದರೆ? ಅಥವಾ ಹಣ ಪಡೆದಿದ್ದ ಪವಿತ್ರಾ ಹಣವನ್ನು ಹಿಂತಿರುಗಿಸಿದ್ದಾರೆಯೇ? ಎಂಬ ಬಗ್ಗೆ ಸದ್ಯ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.

ಇನ್ನು ಸೌಂದರ್ಯ ಜಗದೀಶ್ ಪವಿತ್ರಾ ಗೌಡಗೆ 2 ಕೋಟಿ ಹಣ ನೀಡಿರುವ ವಿಚಾರವಾಗಿ ಸೌಂದರ್ಯ ಜಗದೀಶ್ ಕುಟುಂಬದಿಂದ ಯಾವುದೇ ದೂರು ದಾಖಲಾಗಿಲ್ಲ. ಆದರೆ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣ ಕೂಡ ಇನ್ನೂ ನಿಗೂಢವಾಗಿರುವ ಹಿನ್ನೆಲೆಯಲ್ಲಿ ಸೌಂದರ್ಯ ಜಗದೀಶ್ ಅವರಿಂದ ಬೇರೆಯವರಿಗೆ ಹಣ ವರ್ಗಾವಣೆಯಾಗಿರುವ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...