ಗಾಝಾದಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದ 112 ಜನರ ಸಾವು ದುರಂತ ಎಂದ ಭಾರತ

ನವದೆಹಲಿ : ಇಸ್ರೇಲ್-ಹಮಾಸ್‌ ನಡುವೆ  ಯದ್ಧ ಮುಂದುವರೆದಿದ್ದು, ಗಾಝಾದಲ್ಲಿ ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆ ನಡೆದ ದಾಳಿಯನ್ನು ಭಾರತ ಖಂಡಿಸಿದ್ದು, ಸಹಾಯಕ್ಕಾಗಿ ಕಾಯುತ್ತಿದ್ದ 112 ಜನರ ಸಾವು ದುರಂತ ಎಂದು ಭಾರತ ಹೇಳಿದೆ.

ಜೆರುಸಲೇಂ. ಗಾಝಾದಲ್ಲಿ ಮಾನವೀಯ ನೆರವಿನ ನಿರೀಕ್ಷೆಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 112 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ ಘಟನೆಯ ಬಗ್ಗೆ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯ ತೀವ್ರ ದುಃಖ ವ್ಯಕ್ತಪಡಿಸಿದೆ.

ಸಹಾಯಕ್ಕಾಗಿ ಕಾಯುತ್ತಿದ್ದ 112 ಜನರ ಸಾವು ದುರಂತ: ಭಾರತ

ಮಾನವೀಯ ನೆರವಿಗಾಗಿ ಕಾಯುತ್ತಿದ್ದ 112 ಜನರು ಗುರುವಾರ ಮೃತಪಟ್ಟಿರುವುದು ದುರಂತ ಎಂದು ಭಾರತದ ವಿದೇಶಾಂಗ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. “ಗಾಝಾದಲ್ಲಿ ಮುಂದುವರಿದ ನಾಗರಿಕ ಸಾವುಗಳು ಮತ್ತು ಮಾನವೀಯ ಪರಿಸ್ಥಿತಿ ಕಳವಳಕಾರಿಯಾಗಿದೆ” ಎಂದು ಅವರು ಹೇಳಿದರು.

ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಅಮೆರಿಕ ಮತ್ತು ಜರ್ಮನಿ ಆಗ್ರಹಿಸಿವೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಸ್ರೇಲಿ ಸೈನಿಕರ ಈ ಕೃತ್ಯದ ವಿರುದ್ಧ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಬ್ರೆಜಿಲ್ ಕೂಡ ಈ ಕ್ರಮವನ್ನು ಇಸ್ರೇಲ್ನ ನೈತಿಕ ಮತ್ತು ಕಾನೂನು ವ್ಯಾಪ್ತಿಯಿಂದ ಹೊರಗಿದೆ ಎಂದು ಕರೆದಿದೆ.

ಗಾಝಾ ಯುದ್ಧವನ್ನು ನರಮೇಧ ಎಂದ ಕೊಲಂಬಿಯಾ ಅಧ್ಯಕ್ಷ

ಇದರೊಂದಿಗೆ, ಟರ್ಕಿಯೆ, ಸೌದಿ ಅರೇಬಿಯಾ, ಈಜಿಪ್ಟ್, ಜೋರ್ಡಾನ್, ದಕ್ಷಿಣ ಆಫ್ರಿಕಾ ಕೂಡ ಇದನ್ನು ಟೀಕಿಸಿವೆ. ಗಾಝಾದಲ್ಲಿನ ಯುದ್ಧವು ನರಮೇಧವಾಗಿರುವುದರಿಂದ ಇಸ್ರೇಲ್ ಶಸ್ತ್ರಾಸ್ತ್ರಗಳನ್ನು ಖರೀದಿಸುವುದನ್ನು ನಿಲ್ಲಿಸಲು ಕೊಲಂಬಿಯಾ ಅಧ್ಯಕ್ಷರು ನಿರ್ಧರಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕೂಡ ಘಟನೆಯನ್ನು ಖಂಡಿಸಿ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read