alex Certify ಬೆಂಗಳೂರಿಗರ ಗಮನಕ್ಕೆ : ಇಂದು ‘ರಾಜ್ಯಮಟ್ಟದ ಜನತಾದರ್ಶನ’ ಹಿನ್ನೆಲೆ ಈ ‘ಸಂಚಾರ ಮಾರ್ಗ’ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರ ಗಮನಕ್ಕೆ : ಇಂದು ‘ರಾಜ್ಯಮಟ್ಟದ ಜನತಾದರ್ಶನ’ ಹಿನ್ನೆಲೆ ಈ ‘ಸಂಚಾರ ಮಾರ್ಗ’ ಬದಲಾವಣೆ

ಬೆಂಗಳೂರು : ಇಂದು ವಿಧಾನಸೌಧದ ಮುಂದೆ ಸಿಎಂ ಸಿದ್ದರಾಮಯ್ಯ ಅವರ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಧಾನ ಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ವೃತ್ತದಿಂದ ಗೇಟ್ ನಂಬರ್-04 ರವರಗೆ ಸಂಚಾರವನ್ನು ನಿಷೇಧಿಸಲಾಗಿರುತ್ತದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಡಿ. ದೇವರಾಜು ಅರಸು ರಸ್ತೆಯಲ್ಲಿ ಬರುವ ವಾಹನಗಳು ಎ.ಜಿ.ಎಸ್. ವೃತ್ತ ಮೂಲಕ ಎಂ.ಎಸ್. ಬಿಲ್ಡಿಂಗ್ ಒಳಭಾಗದಿಂದ ಪ್ರವೇಶಿಸಿ ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಎಡ ತಿರುವು ಪಡೆದುಕದೊಂಡು ಸಂಚರಿಸುವುದು.

ಚಾಲುಕ್ಯ ವೃತ್ತದಿಂದ ಬರುವ ವಾಹನಗಳು ಸಿ.ಐ.ಡಿ. ಕಛೇರಿ ಮುಂಭಾಗವಾಗಿ ಚಲಿಸಿ ಮಹಾರಾಣಿ ಕಾಲೇಜು ಅಪ್ಪರ್ ಕ್ಯಾಂಪ್ ಮಾರ್ಗವಾಗಿ ಎಡ ತಿರುವು ಪಡೆದು ಕೆ.ಆರ್. ವೃತ್ತದಿಂದ ಅಂಬೇಡ್ಕರ್ ವೀದಿ / ಸಿಟಿ ಸಿವಿಲ್ ಕೋರ್ಟ್ ರಸ್ತೆಯನ್ನು ಉಪಯೋಗಿಸಬಹುದು.

ಇಂದು ಬೆಳಿಗ್ಗೆ 6.00 ರಿಂದ ರಾತ್ರಿ 07-00 ರ ವರೆಗೆ ವಾಹನ ನಿಲುಗಡೆ

ನಿಷೇಧವಿರುವ ರಸ್ತೆಗಳ ವಿವರ:

  1. ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ,
  2. ರಾಜಭವನ ರಸ್ತೆ, ಪ್ಯಾಲೇಸ್ ರಸ್ತೆ,
  3. ಡಿ. ದೇವರಾಜು ಅರಸು ರಸ್ತೆ
  4. ಶೇಷಾದ್ರಿ ರಸ್ತೆ.

ಇಂದು ಸಾರ್ವಜನಿಕ ವಾಹನ ನಿಲುಗಡೆ ಸ್ಥಳಗಳು (ಸ್ಥಳ ಲಭ್ಯತೆಯ ಮೇಲೆ/ಪಾವತಿ ನಿಲುಗಡೆ)

*ಸ್ಕೌಟ್ ಮತ್ತು ಗೈಡ್ಸ್ ಪಾರ್ಕಿಂಗ್ ಸ್ಥಳ

*ಜ್ಞಾನ ಜ್ಯೋತಿ ಮತ್ತು ಬೆಂಗಳೂರು ವಿಶ್ವವಿಧ್ಯಾಲಯ ಪಾರ್ಕಿಂಗ್ ಸ್ಥಳ.

*ಸೆಂಟ್ರಲ್ ಕಾಲೇಜ್

*ಸ್ವಾತಂತ್ರ್ಯ ಉದ್ಯಾನವನ

*ಅರಮನೆ ಮೈದಾನ ಪಾರ್ಕಿಂಗ್ ಸ್ಥಳ

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...