ಹರಿತ ಆಯುಧದಿಂದ ಹಲ್ಲೆಗೈದು ಮಲಗಿದ್ದಲ್ಲೇ ಮೂವರ ಹತ್ಯೆ: ಪುತ್ರನ ವಿಚಾರಣೆ

ಜೈಪುರ: ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ದಂಪತಿ, ಪುತ್ರಿ ಮಲಗಿದ್ದಾಗ ಕಡಿದು ಕೊಂದ ಘಟನೆ ನಡೆದಿದ್ದು, ಕೊಲೆಯಲ್ಲಿ ಪುತ್ರನ ಪಾತ್ರವಿದೆ ಎಂದು ಶಂಕಿಸಿರುವ ಪೊಲೀಸರು ಮೃತ ದಂಪತಿ ಮಗನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಪಡುಕಳನ್ ಪಟ್ಟಣದ ನಿವಾಸಿ ದಿಲೀಪ್ ಸಿಂಗ್(45), ಅವರ ಪತ್ನಿ ರಾಜೇಶ್ ಕನ್ವರ್(40) ಮತ್ತು ಪುತ್ರಿ ಪ್ರಿಯಾಂಕಾ(15) ಅವರನ್ನು ಶನಿವಾರ ರಾತ್ರಿ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ ಎಂದು ಪಡುಕಳನ್ ಎಸ್‌ಹೆಚ್‌ಒ ಮಾನವೇಂದ್ರ ಸಿಂಗ್ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಯ ಪುತ್ರನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read