![](https://kannadadunia.com/wp-content/uploads/2022/09/drowned-death-3x2_0.jpg)
ಕಾರವಾರ: ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹರಿದೇವರನಗರದಲ್ಲಿ ನಡೆದಿದೆ.
3 ವರ್ಷದ ಸ್ತುತಿ ಮೃತ ಮಗು. ಬಾವಿಯ ಬಳಿಯೇ ಆಟವಾಡುತ್ತಿದ್ದ ಮಗು ಬಾವಿಗೆ ಮಣ್ಣು ಹಾಕಲು ಮುಂದಾದಾಗ ಆಯತಪ್ಪಿ ಬಾವಿಗೆ ಬಿದ್ದಿದೆ. ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾಗಲಾಯಿತಾದರೂ ಮಗು ಕೊನೆಯುಸಿರೆಳೆದಿದೆ.
ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.