‘ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲಿಲ್ಲ’ : ಅತ್ತಿಗೆ ‘ಸ್ಪಂದನಾ’ ನೆನೆದು ಕಣ್ಣೀರಿಟ್ಟ ನಟ ಶ್ರೀ ಮುರುಳಿ

ಬೆಂಗಳೂರು : ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲಿಲ್ಲ , ಅಣ್ಣ ರಾಘು ಈ ವಿಚಾರ ಹೇಳಿದರು ಎಂದು ಅತ್ತಿಗೆ ‘ಸ್ಪಂದನಾ’ ನೆನೆದು ನಟ ಶ್ರೀ ಮುರುಳಿ ಕಣ್ಣೀರಿಟ್ಟಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡುವಾಗ ನಟ ಶ್ರೀ ಮುರುಳಿ ಅತ್ತಿಗೆಯನ್ನು ನೆನೆದು ಭಾವುಕರಾದರು ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ , . ’ಅಣ್ಣ ನನಗೆ ಕಾಲ್ ಮಾಡಿ ಹೇಳಿದ್ದು ಇಷ್ಟೇ..ಆಮೇಲೆ ಏನಾಯಿತು ಎನ್ನುವುದರ ಕುರಿತು ನಾಳೆಯೇ ಸ್ಪಷ್ಟತೆ ಸಿಗಲಿದೆ ಎಂದರು.

ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದು , ಬ್ಯಾಂಕಾಕ್ ನಿಂದ ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸ್ಪಂದನಾ ಅವರ ಅಪ್ಪ ಮತ್ತು ಕುಟಂಬ ವರ್ಗದವರು ಅಲ್ಲೇ ಇದ್ದಾರೆ ಎನ್ನಲಾಗಿದೆ. ಇನ್ನೂ ಬೆಂಗಳೂರಿನಿಂದ ಬ್ಯಾಂಕಾಕ್ಗೆ ವಿಜಯ್ ರಾಘವೇಂದ್ರ ಅವರು ತೆರಳುತ್ತಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read