ಚಿಕ್ಕಬಳ್ಳಾಪುರ : ಕೊರೊನಾ ವೇಳೆ ಭ್ರಷ್ಟಾಚಾರ ನಡೆದಿಲ್ಲ ಎಂದು ದೀಪ ಹಚ್ಚಲಿ ಎಂದು ಮಾಜಿ ಸಚಿವ ಸುಧಾಕರ್ ಗೆ ಶಾಸಕ ಪ್ರದೀಪ್ ಈಶ್ವರ್ ಸವಾಲ್ ಹಾಕಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಪ್ರದೀಪ್ ಈಶ್ವರ್ ‘ ಕೊರೊನಾ ವೇಳೆ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಅವರು ದೀಪ ಹಚ್ಚಿ ಪ್ರಮಾಣ ಮಾಡಲಿ, ನಾನು ದಾಖಲೆ ಸಮೇತ ಬಂದು 22 ಸಾವಿರ ಸೈಟ್ ಗಳ ಕುರಿತು ನಂದಿ ದೇಗುಲದಲ್ಲಿ ದೀಪ ಹಚ್ಚುತ್ತೇನೆ ಎಂದು ಪ್ರದೀಪ್ ಈಶ್ವರ್ ಸವಾಲ್ ಹಾಕಿದ್ದಾರೆ. ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿಲ್ಲ. ಶಾಸಕ ಪ್ರದೀಪ್ ಈಶ್ವರ್ ಭೋಗನಂದೀಶ್ವರ ದೇವಸ್ಥಾನದಲ್ಲಿ ಬಂದು ದೀಪ ಹಚ್ಚಲಿ ಎಂದು ಮಾಜಿ ಸಚಿವ ಸುಧಾಕರ್ ಮೊದಲು ಸವಾಲ್ ಹಾಕಿದ್ದರು. ಇದಕ್ಕೆ ಪ್ರದೀಪ್ ಈಶ್ವರ್ ಇದೀಗ ಮರು ಸವಾಲ್ ಹಾಕಿದ್ದಾರೆ.
ಕೊರೊನಾ ವೇಳೆ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಅವರು ದೀಪ ಹಚ್ಚಿ ಪ್ರಮಾಣ ಮಾಡಲಿ ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡು ಹಾಕ್ಕೊಂಡು ದೀಪ ಹಚ್ಚೋಣ ಎಂದು ಪ್ರದೀಪ್ ಈಶ್ವರ್ ಹೇಳಿದರು. ಮಾಜಿ ಸಚಿವರ ರಾಜಕೀಯ ಜನರ ಮುಂದೆ ನಡೆಯಲಿಲ್ಲ, ಹಾಗಾಗಿ ನಾನು ಗೆದ್ದೆ ಎಂದು ಹೇಳಿದರು.