Watch Video | ಪೊಲೀಸರ ಎದುರೇ ಪತ್ರಕರ್ತರ ಮೇಲೆ ಕಲ್ಲೆಸೆದ ಕುಖ್ಯಾತ ಪಾತಕಿ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರನಾಥ್ ಪ್ರದೇಶದಲ್ಲಿ ಪೊಲೀಸರ ಎದುರೇ ಪತ್ರಕರ್ತರ ಮೇಲೆ ಕುಖ್ಯಾತ ಪಾತಕಿಯೊಬ್ಬ ಕಲ್ಲು ತೂರಾಟ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಜುಲೈ 3 ರ ಸೋಮವಾರ ಮಧ್ಯಾಹ್ನ ಅಪರಾಧಿಯನ್ನು ಜೈಲಿಗೆ ಸ್ಥಳಾಂತರಿಸುವಾಗ ಈ ಘಟನೆ ಸಂಭವಿಸಿದೆ. ಆರೋಪಿ ಜಿತೇಂದ್ರ ಪವಾರ್ ಈ ಪ್ರದೇಶದಲ್ಲಿ ಕುಖ್ಯಾತ ಕ್ರಿಮಿನಲ್ ಆಗಿದ್ದಾನೆ.

ಮಹಾರಾಷ್ಟ್ರದ ಕೊಳೆಗೇರಿಗಳ ಅಪಾಯಕಾರಿ ಚಟುವಟಿಕೆಗಳ ತಡೆಗಟ್ಟುವಿಕೆ, ಕಾಳಧನಿಕರು, ಮಾದಕವಸ್ತು ಅಪರಾಧಿಗಳು, ಅಪಾಯಕಾರಿ ವ್ಯಕ್ತಿಗಳು ಮತ್ತು ವೀಡಿಯೊ ಪೈರೇಟ್ಸ್ ಕಾಯಿದೆ 1981 (MPDA ಕಾಯಿದೆ) ಅಡಿಯಲ್ಲಿ ವಿಚಾರಣೆಗೊಳಪಡಿಸಿ ಆತನಿಗೆ ಶಿಕ್ಷೆ ನೀಡಲಾಗಿದೆ.

ಅಂಬರನಾಥ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿದ್ದ ಜಿತೇಂದ್ರ ಪವಾರ್ ನನ್ನು ಜೈಲಿಗೆ ಸ್ಥಳಾಂತರಿಸಲಾಯಿತು. ಈ ಸಮಯದಲ್ಲಿ ಕೆಲವು ಪತ್ರಕರ್ತರು ಅಲ್ಲಿ ಜಮಾಯಿಸಿದ್ದರು. ಆ ವೇಳೆ ಕೋಪಗೊಂಡ ಆತ ಪತ್ರಕರ್ತರ ಮೇಲೆ ಆಕ್ರಮಣಕಾರಿಯಾಗಿ ಕಲ್ಲು ತೂರಿದ. ಅದೃಷ್ಟವಶಾತ್ ಈ ವೇಳೆ ಯಾರಿಗೂ ಗಾಯವಾಗಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ರಕರ್ತರಿಗೆ ಗಾಯವಾಗದಿದ್ದರೂ ಸಮಸ್ಯೆಯು ಸಾಕಷ್ಟು ಗಂಭೀರವಾಗಿದೆ ಮತ್ತು ಇದು ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಸಾರ್ವಜನಿಕರನ್ನು ಒತ್ತಾಯಿಸಿದೆ. ಸಾಮಾಜಿಕ ಬಳಕೆದಾರರು ಈ ವಿಡಿಯೋವನ್ನು ಟ್ವೀಟ್ ಮಾಡಿ ಕ್ರಮ ಕೈಗೊಳ್ಳುವಂತೆ ಥಾಣೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಂಬರನಾಥ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ಕೋರಿದ್ದೇವೆ ಎಂದು ಥಾಣೆ ಪೊಲೀಸರು ತಿಳಿಸಿದ್ದಾರೆ.

https://twitter.com/roshanlasrado24/status/1676055453057564673?ref_src=twsrc%5Etfw%7Ctwcamp%5Etweetembed%7Ctwterm%5E1676055453057564673%7Ctwgr%5E60c59ea37d1530abb14a62995afbe6a5ef8503bd%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fthane-news-wanted-criminal-in-ambernath-hurls-stone-at-journalist-in-front-of-cops-video-goes-viral

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read