![](https://kannadadunia.com/wp-content/uploads/2023/06/3c1067e0-00ce-4109-8ba3-1c77d4443dc9.jpg)
ಬಿಪರ್ಜಾಯ್ ಚಂಡಮಾರುತ ತೀವ್ರಗೊಳ್ತಿದ್ದು ಗುಜರಾತ್ನ ವಲ್ಸಾದ್ನ ತಿಥಾಲ್ ಬೀಚ್ನಲ್ಲಿ ಶನಿವಾರ ಬೆಳಗ್ಗೆ ಎತ್ತರದ ಅಲೆಗಳು ಕಾಣಿಸಿಕೊಂಡವು. ಜೂನ್ 9 ರಂದು ಬಿಪರ್ಜಾಯ್ ಚಂಡಮಾರುತದ ಎಚ್ಚರಿಕೆಯ ನಂತರ ವಲ್ಸಾದ್ ಆಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ತಿಥಾಲ್ ಬೀಚ್ ಅನ್ನು ಪ್ರವಾಸಿಗರಿಗೆ ನಿರ್ಬಂಧಿಸಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಗ್ಗು ಪ್ರದೇಶದಲ್ಲಿನ ದರಿಯಾ ಕಾಂತನ್ ಗ್ರಾಮದಲ್ಲಿ, ಅಗತ್ಯವಿದ್ದರೆ ಜನರನ್ನು ಸ್ಥಳಾಂತರಿಸಲಾಗುವುದು ಮತ್ತು ಅವರಿಗೆ ಆಶ್ರಯ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಚಂಡಮಾರುತ ಹಿನ್ನೆಲೆಯಲ್ಲಿ ಜೂನ್ 14 ರವರೆಗೆ ಪ್ರವಾಸಿಗರಿಗೆ ತಿಥಾಲ್ ಬೀಚ್ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.
ಬಿಪರ್ ಜಾಯ್ ಚಂಡಮಾರುತವು ಭಾರತದ ಕರಾವಳಿಯಲ್ಲಿ ಭೂಕುಸಿತವನ್ನು ಉಂಟುಮಾಡಬಹುದು ಎಂದು ಊಹಿಸಲಾಗಿದ್ದು ಅದರ ತೀವ್ರತೆ ಹೆಚ್ಚಾಗಿರುವುದರಿಂದ ಬಹುಶಃ ಗುಜರಾತ್ ನ ಕರಾವಳಿ ಭಾಗದಲ್ಲಿ ಭೂಕುಸಿತವುಂಟಾಗುವ ನಿರೀಕ್ಷೆಯಿದೆ.