ನವದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ರೈಲು ದುರಂತದಲ್ಲಿ (In Odisha train tragedy) ಕೋರಮಂಡಲ್ ಎಕ್ಸ್ ಪ್ರೆಸ್ (Coromandel Express) ನಲ್ಲಿದ್ದ ಕನಿಷ್ಠ 40 ಪ್ರಯಾಣಿಕರು ವಿದ್ಯುತ್ ಆಘಾತ (Electric shock)ದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪೋಟಕ ಮಾಹಿತಿ ಬಯಲಾಗಿದೆ.
ಜಿ ಆರ್ ಪಿಯಲ್ಲಿ ದಾಖಲಾದ ಎಫ್ಐಆರ್ ನಲ್ಲಿ ಲೋ ಟೆನ್ಷನ್ ಲೈನ್ ಸಂಪರ್ಕಕ್ಕೆ ಬಂದ ನಂತರ ಡಿಕ್ಕಿ ಮತ್ತು ವಿದ್ಯುದಾಘಾತದಿಂದಾಗಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಎಂದು ತಿಳಿಸಲಾಗಿದೆ. ಅಧಿಕಾರಿಗಳ ಪ್ರಕಾರ, ತ್ರಿವಳಿ ರೈಲು ಅಪಘಾತದ ಸಮಯದಲ್ಲಿ ಬೋಗಿಗಳು ಉರುಳಿಬಿದ್ದಿದ್ದರಿಂದ ಓವರ್ ಹೆಡ್ ತಂತಿಗಳು ಮುರಿದು ಬಿದ್ದವು ಎಂದು ವರದಿಯಾಗಿದೆ.
278 ಜನರನ್ನು ಬಲಿ ತೆಗೆದುಕೊಂಡ ಮತ್ತು ಸಾವಿರಾರು ಜನರನ್ನು ಗಾಯಗೊಳಿಸಿದ ದುರಂತ ರೈಲು ಅಪಘಾತದ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಯನ್ನು ಕೈಗೆತ್ತಿಕೊಂಡಿದೆ ಮತ್ತು ಪ್ರಕರಣವನ್ನು ದಾಖಲಿಸಿದೆ. ಮಾನವ ದೋಷ ಅಥವಾ ಅಪಘಾತಕ್ಕೆ ಕಾರಣವಾಗುವ ಉದ್ದೇಶಪೂರ್ವಕ ಪ್ರಯತ್ನಗಳು ಸೇರಿದಂತೆ ಎಲ್ಲಾ ಸಂಭವನೀಯ ಕಾರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ