ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ಹಿಂದಿನ ಮಾಸ್ಟರ್ ಮೈಂಡ್ , ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರ ಸುನೀಲ್ ಕುನಗೋಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರರಾಗಿ ನೇಮಕಗೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಸುನೀಲ್ ಕುನಗೋಳು ಕಳೆದ ವರ್ಷ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು ಮತ್ತು ಮೇ 10 ರಂದು ನಡೆದ ಚುನಾವಣೆಯಲ್ಲಿ ಪಕ್ಷದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಬಿಜೆಪಿಯ ಪ್ರಚಾರ ಸಂಸ್ಥೆ, ಅಸೋಸಿಯೇಷನ್ ಆಫ್ ಬ್ರಿಲಿಯಂಟ್ ಮೈಂಡ್ಸ್ (ABM) ನ ಮಾಜಿ ಮುಖ್ಯಸ್ಥ ಮತ್ತು ರಾಜಕೀಯ ಸಲಹಾ ಸಂಸ್ಥೆ ಇನ್ಕ್ಲೂಸಿವ್ ಮೈಂಡ್ಸ್ನ ಪ್ರಸ್ತುತ ಮುಖ್ಯಸ್ಥ ಸುನೀಲ್ ಕುನಗೋಳು ಕರ್ನಾಟಕ ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯ ಅವರಿಗೆ ಬ್ರ್ಯಾಂಡಿಂಗ್ ಮತ್ತು ಭಾಷಣ ಇನ್ಪುಟ್ಗಳನ್ನು ಒದಗಿಸಿದ್ದರು.
ಸ್ವತಃ ಮುಖ್ಯಮಂತ್ರಿಗಳೇ ಕುನಗೋಳು ಅವರನ್ನು ಸಲಹೆಗಾರರನ್ನಾಗಿ ನೇಮಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. PayCm ಮತ್ತು 40% ಸರ್ಕಾರ ಸೇರಿದಂತೆ ಬಿಜೆಪಿ ವಿರುದ್ದ ಕಾಂಗ್ರೆಸ್ನ ಹಲವಾರು ಆಕರ್ಷಕ ಪ್ರಚಾರಗಳನ್ನು ರಚಿಸಿದ ಕೀರ್ತಿ ಸುನಿಲ್ ಕುನಗೋಳು ಅವರದ್ದು.