ಅಕಾಲಿಕ ಮಳೆಯಿಂದ ತತ್ತರಿಸಿರುವ ಮಧ್ಯ ಪ್ರದೇಶದ ಬುರ್ಹಾನ್ಪುರದ ರೈತರು ಬೆಳೆದಿದ್ದ ಬಾಳೆ ಹಾಗೂ ಅರಿಶಿನದ ಬೆಳೆಗೆ ಅಪಾರ ಹಾನಿಯಾಗಿದೆ.
ಮಧ್ಯಾಹ್ನ ಮೂರು ಗಂಟೆಗೆ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚಿನ ಅವಧಿಗೆ ಮುಂದುವರೆದಿದೆ. ಆಲಿಕಲ್ಲುಗಳು ಬಾಳೆಹಣ್ಣು ಹಾಗೂ ಅರಿಶಿನದ ಬೆಳೆಗೆ ಏಟು ಮಾಡಿದ್ದು, ರೈತರಿಗೆ ಭಾರೀ ನಷ್ಟವುಂಟಾಗಿದೆ.
ಬುಡಮೇಲಾದ ಬಾಳೇಗಿಡಗಳ ವಿಡಿಯೋವೊಂದು ಟ್ವಿಟರ್ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ರೈತರ ಪಾಡನ್ನು ಕಂಡು ಮುಮ್ಮಲ ಮರುಗಿದ್ದಾರೆ.
https://twitter.com/FreePressMP/status/1652257112641400833?ref_src=twsrc%5Etfw%7Ctwcamp%5Etweetembed%7Ctwterm%5E1652257112641400833%7Ctwgr%5E5a46a4a63a86287e181abd1276291a087a7629fc%7Ctwcon%5Es1_&ref_url=https%3A%2F%2Fwww.freepressjournal.in%2Findore%2Fwatch-hailstorm-damages-banana-plantations-in-mps-burhanpur-causes-heavy-loss-to-farmers