alex Certify ನಾಗರ ಹಾವು ಕುತ್ತಿಗೆಗೆ ಹಾಕ್ಕೊಂಡು ಚುನಾವಣಾ ಭವಿಷ್ಯ ನುಡಿದ ವ್ಯಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗರ ಹಾವು ಕುತ್ತಿಗೆಗೆ ಹಾಕ್ಕೊಂಡು ಚುನಾವಣಾ ಭವಿಷ್ಯ ನುಡಿದ ವ್ಯಕ್ತಿ..!

ರಾಯಚೂರು: 2023 ವಿಧಾನಸಭಾ ಚುನಾವಣೆ ರಂಗೇರಿದೆ. ಈಗಾಗಲೇ ಮೂರು ಪಕ್ಷದವರೂ ಸೇರಿದಂತೆ ಬೇರೆ ಬೇರೆ ಪಕ್ಷದವರು ಕೂಡ ಅಬ್ಬರದ ಪ್ರಚಾರ ಮಾಡ್ತಾ ಇದ್ದಾರೆ. ಒಂದಿಷ್ಟು ಆಂತರಿಕ ‌ಸರ್ವೇಗಳು ಕೂಡ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಆಗ್ತಾ ಇವೆ. ಇದರ ಬೆನ್ನಲ್ಲೇ ರಾಯಚೂರು ಜಿಲ್ಲೆಯಲ್ಲಿ ವಿಭಿನ್ನವಾಗಿ ಅಭ್ಯರ್ಥಿಯ ರಾಜಕೀಯ ಭವಿಷ್ಯ ನುಡಿದಿದ್ದಾನೆ ಓರ್ವ ವ್ಯಕ್ತಿ.

ಹೌದು, ನಾಗರ ಹಾವು ಹಿಡಿದು ಕುತ್ತಿಗೆಗೆ ಹಾಕೊಂಡು ಚುನಾವಣಾ ಭವಿಷ್ಯ ನುಡಿದ್ದಾನೆ. ನಾಗರಹಾವು ಹಿಡಿದು ಜೆಡಿಎಸ್ ಅಭ್ಯರ್ಥಿ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಸಮುದ್ರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಬಂದಿದ್ದ ನಾಗರಹಾವು ಹಿಡಿದುಕೊಂಡು ಹುಚ್ಚಾಟ ಮಾಡಿದ್ದಾನೆ. ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ್ ಗೆಲುವು ಸಾಧಿಸುತ್ತಾರೆ ಎಂದಿದ್ದಾನೆ.

ಹಾಲಿ ಶಾಸಕ ಕೆ. ಶಿವನಗೌಡ ನಾಯಕ್ ವಿರುದ್ಧ ಗೆಲ್ಲಬೇಕು, ನೀವು ಮಂತ್ರಿಯಾಗಬೇಕು ಎಂದೆಲ್ಲ ಹೇಳಿದ್ದಾರೆ. ಇನ್ನು ಹಾವಿನ ಜೊತೆಗೆ 50 ರೂ. ನೋಟ್ ಹಿಡಿದುಕೊಂಡು ಹುಚ್ಚಾಟ ಮೆರೆದಿದ್ದಾನೆ. ಚುನಾವಣೆ ಇನ್ನು ಮೂರ್ನಾಲ್ಕು ತಿಂಗಳು ಬಾಕಿ ಇರುವಾಗಲೇ ರಂಗೇರಿದ ದೇವದುರ್ಗ ವಿಧಾನಸಭಾ ಕ್ಷೇತ್ರ. ಈ ಬಾರಿ ಬಿಜೆಪಿ ಶಾಸಕ ಶಿವನಗೌಡ ವಿರುದ್ಧ ಕಣಕ್ಕಿಳಿಯಲು ಮುಂದಾಗಿದ್ದಾರೆ ಜೆಡಿಎಸ್ ನಾಯಕಿ ಕರೆಮ್ಮ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...