ನಾನು ‘RSS’ ಸಂಘಟನೆಯನ್ನೇ ನಿಷೇಧಿಸಬೇಕು ಎಂದು ಪತ್ರ ಬರೆದಿಲ್ಲ : ಮತ್ತೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ


ಬೆಂಗಳೂರು : ನಾನು RSS ಸಂಘಟನೆಯನ್ನೇ ನಿಷೇಧಿಸಬೇಕು ಎಂದು ಪತ್ರ ಬರೆದಿಲ್ಲ ಎಂದು ಮತ್ತೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ”ನಾನು ಆರ್ಎಸ್ಎಸ್ ಸಂಘಟನೆಯನ್ನೇ ನಿಷೇಧಿಸಬೇಕು ಎಂದು ಪತ್ರ ಬರೆದಿಲ್ಲ. ಆರ್ಎಸ್ಎಸ್ ರೀತಿಯ ಕೆಲವು ಸಂಘ-ಸಂಸ್ಥೆಗಳು ಯುವಕರ ಮನಸಿನಲ್ಲಿ ಅಸಾಂವಿಧಾನಿಕ ವಿಚಾರಗಳನ್ನು ಹುಟ್ಟುಹಾಕುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಅವರು ಚಟುವಟಿಕೆ ನಡೆಸಲು ಅವಕಾಶ ನೀಡಬಾರದು ಎಂದಿದ್ದೇನೆ. ನನ್ನ ಆಗ್ರಹ ತರ್ಕಬದ್ಧವಾಗಿದೆ’ ಎಂದಿದ್ದಾರೆ.

”ನೂರು ವರ್ಷ ಇತಿಹಾಸ ಇರುವ ವಿಶ್ವದ ಅತಿ ದೊಡ್ಡ ಎನ್ಜಿಒಗೆ ದೇಶ, ಸಂವಿಧಾನ, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದವರಿಗಾಗಿ ಮಾಡಿದ ಹತ್ತು ಸಾಧನೆಗಳ ಪಟ್ಟಿ ನೀಡಲು ಏಕೆ ಸಾಧ್ಯವಾಗುತ್ತಿಲ್ಲ? ನನ್ನ ನಿಲುವುಗಳ ಕುರಿತು ಈ ದಿನ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದೇನೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read