ಬೆಂಗಳೂರು : ನಾನು ಯಾವುದೇ ‘ಎಬಿವಿಪಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
”ದಾರಿಯಲ್ಲಿ ರಾಣಿ ಅಬ್ಬಕ್ಕ ಮೆರವಣಿಗೆ ಬರುತ್ತಿತ್ತು, ಹೂ ಹಾಕಿ ಹೋಗಿ ಅಂದ್ರು. ನಾನು ಹಾಕಿ ಬಂದೆ. ಇದನ್ನು ವಿವಾದ ಮಾಡೋದು ಬೇಡ, ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ತುಮಕೂರಿನ ತಿಪಟೂರಿನಲ್ಲಿ ಎಬಿವಿಪಿ ನಡೆಸುತ್ತಿದ್ದ ರಾಣಿ ಅಬ್ಬಕ್ಕದೇವಿಯ ಕಾರ್ಯಕ್ರಮದ ಪಂಜಿನ ಮೆರವಣಿಗೆಯಲ್ಲಿ ಗೃಹ ಸಚಿವ ಪರಮೇಶ್ವರ್ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು, ಈ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
, “…ನಾನು ಯಾವುದೇ ಎಬಿವಿಪಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲು ತಿಪಟೂರಿಗೆ ಹೋದಾಗ, ಮೆರವಣಿಗೆ ನಡೆಸಲಾಗುತ್ತಿತ್ತು… ಅದು ರಾಣಿ ಅಬ್ಬಕ್ಕ ಅವರ ಮೆರವಣಿಗೆ ಎಂದು ನನಗೆ ತಿಳಿಯಿತು, ಆದ್ದರಿಂದ ನಾನು ಅಲ್ಲಿ ನಿಂತು ಅವರಿಗೆ ಗೌರವ ಸಲ್ಲಿಸಿದೆ… ಅದು ಎಬಿವಿಪಿ ಕಾರ್ಯಕ್ರಮವಲ್ಲ… ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನು ನಾವು ಗೌರವಿಸುತ್ತೇವೆ…ಎಂದರು.ಬಿಜೆಪಿ ಎಂಎಲ್ಸಿ ಮತ್ತು ಮಾಜಿ ಸಚಿವ ಸಿ.ಟಿ. ರವಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತು ಮಾತನಾಡಿದ ಅವರು, “…ಸಿಟಿ ರವಿ ದ್ವೇಷದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ, ಅದನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ…” ಎಂದು ಹೇಳಿದ್ದಾರೆ.
#WATCH | Bengaluru | Karnataka Home Minister G. Parmeshwara says, "…I did not attend any ABVP program as such. When I went to Tiptur to chair a review meeting, a procession was being taken out… I got to know that it was a procession for Rani Abbakka, so I stopped there and… pic.twitter.com/4uY0AhYuQx
— ANI (@ANI) September 11, 2025