ಬೆಂಗಳೂರು : ಧರ್ಮಸ್ಥಳ ಪ್ರಕರಣವನ್ನ ಎನ್ ಐ ಗೆ (NIA) ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಧರ್ಮಸ್ಥಳದ ಅಪಪ್ರಚಾರ ಪ್ರಕರಣದ ತನಿಖೆಯನ್ನ ಎಸ್ ಐ ಟಿ ಸರಿಯಾಗಿ ನಡೆಸುತ್ತಿದೆ. ಆದ್ದರಿಂದ ಎನ್ ಐ ಎ ತಂಡದ ತನಿಖೆ ಅಗತ್ಯವಿಲ್ಲ. ಹೀಗೆ ತನಿಖೆ ಮಾಡಿ, ಹಾಗೆ ತನಿಖೆ ಮಾಡಿ ಎಂದು ಹೇಳಲು ನಾವು ಯಾರ ಎಂದರು. ತನಿಖೆಗೆ ಏನು ಅವಶ್ಯಕತೆ ಬೇಕೋ..ಅದನ್ನ ಪೊಲೀಸರು ಮಾಡುತ್ತಾರೆ ಎಂದರು..ಎಸ್ ಐ ಟಿ ಸರಿಯಾಗಿ ಪ್ರಕರಣದ ತನಿಖೆ ಮಾಡುತ್ತಿದೆ, ಅದನ್ನ ಎನ್ ಐ ಎಗೆ ನೀಡುವ ಅಗತ್ಯವಿಲ್ಲ ಎಂದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ 90% ತನಿಖೆ ಮುಗಿದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ಬಹುತೇಕ ಮುಕ್ತಾಯವಾಗಿದೆ. ಎನ್ ಐಎ ಅಥವಾ ಸಿಬಿಐ ತನಿಖೆ ಅಗತ್ಯವಿಲ್ಲ. ನಮ್ಮ ಪೊಲೀಸರೇ ಸಮರ್ಥವಾಗಿದ್ದಾರೆ ಎಂದು ಹೇಳಿದರು.
You Might Also Like
TAGGED:ಜಿ.ಪರಮೇಶ್ವರ್