ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆನೆ(ಇಪಿಎಫ್ಒ) ಸದಸ್ಯರು ನಿಧನರಾದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೀಡುವ ಮರಣ ಪರಿಹಾರ ನಿಧಿಯನ್ನು 8.8 ಲಕ್ಷ ರೂ.ನಿಂದ 15 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಪ್ರಸಕ್ತ ವರ್ಷದ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಸಿಬ್ಬಂದಿ ಕಲ್ಯಾಣ ನಿಧಿಯಿಂದ ಈ ಮೊತ್ತವನ್ನು ಭರಿಸಲಾಗುವುದು. 2025ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಈ ದಿನಾಂಕದ ಬಳಿಕ ಉದ್ಯೋಗಿಯೊಬ್ಬರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 8.8 ಲಕ್ಷ ರೂ. ಬದಲಿಗೆ 15 ಲಕ್ಷ ರೂ. ಸಿಗಲಿದೆ. ಈ ಬಗ್ಗೆ ಆಗಸ್ಟ್, 19ರಂದು ಸುತ್ತೋಲೆ ಹೊರಡಿಸಲಾಗಿದ್ದು, 2026ರ ಏಪ್ರಿಲ್ 1ರಿಂದ ಈ ಪರಿಹಾರದ ಮೊತ್ತ ಪ್ರತಿವರ್ಷ ಶೇಕಡ 5ರಷ್ಟು ಹೆಚ್ಚಳ ಆಗಲಿದೆ ಎಂದು ಹೇಳಲಾಗಿದೆ.