BREAKING : ಕಾವೇರಿ ನಿವಾಸದಲ್ಲಿ “ಕನಕರಾಜ” ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ CM ಸಿದ್ದರಾಮಯ್ಯ.!

ಬೆಂಗಳೂರು :  ಕಾವೇರಿ ನಿವಾಸದಲ್ಲಿ ಇಂದು  ಸಿಎಂ ಸಿದ್ದರಾಮಯ್ಯ “ಕನಕರಾಜ” ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು.

ಕಾವೇರಿ ನಿವಾಸದಲ್ಲಿ ಇಂದು “ಕನಕರಾಜ” ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿ, ಚಿತ್ರ ಯಶಸ್ವಿಯಾಗಲಿ ಎಂದು ಮನದುಂಬಿ ಹಾರೈಸಿದೆ. ಮಾಜಿ ಸಚಿವರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಮತ್ತು ಸಿನಿಮಾ ತಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ” : ಸುಭಾಷ್ ಚಂದ್ರ ಬೋಸ್

“ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ”  ಎಂದು ಕರೆಕೊಟ್ಟು ಭಾರತೀಯರನ್ನು ದಾಸ್ಯದ ಕತ್ತಲೆಯಿಂದ ಸ್ವಾತಂತ್ರ್ಯದ ಬೆಳಕಿನೆಡೆಗೆ ಬಡಿದೆಬ್ಬಿಸಿದ ಮಹಾನ್ ಚೇತನ ಸುಭಾಷ್ ಚಂದ್ರ ಬೋಸ್ ಅವರು. ಆಜಾದ್ ಹಿಂದ್ ಫೌಜ್‌ ಅನ್ನು ಸ್ಥಾಪಿಸಿ, ಸಶಸ್ತ್ರ, ಸಂಘಟಿತ ಹೋರಾಟವನ್ನು ಮುನ್ನಡೆಸಿದ ಬೋಸ್ ಅವರ ದೇಶಪ್ರೇಮ ಮತ್ತು ದಿಟ್ಟತನವು ಎಂದೆಂದಿಗೂ ಪ್ರೇರಣೆಯಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆಯ ದಿನ ಅವರ ತ್ಯಾಗ – ಬಲಿದಾನವನ್ನು ಗೌರವದಿಂದ ಸ್ಮರಿಸಿ, ನಮಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read