ಬೆಂಗಳೂರು: ಸಫಾರಿ ವೇಳೆ 13 ವರ್ಷದ ಬಾಲಕನ ಮಾಂಸಕಿತ್ತು ಬರುವಂತೆ ಚಿರತೆ ಪರಚಿದೆ. ಬೆಂಗಳೂರು ನಗರ ಜಿಲ್ಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಘಟನೆ ನಡೆದಿದೆ.
ಪೋಷಕರೊಂದಿಗೆ ಚಿರತೆ ಸಫಾರಿಗೆ ತೆರಳಿದ್ದ ವೇಳೆಯಲ್ಲಿ ಕಾರ್ ಅನ್ನು ಬೆನ್ನಟ್ಟಿ ಬಂದು ಹಾರಿದ ಚಿರತೆ ಬಾಲಕನ ಕೈ ಪರಚಿದೆ. ಮಾಂಸ ಕಿತ್ತು ಬರುವಂತೆ ಬಾಲಕನ ಕೈಗೆ ಚಿರತೆ ಪರಚಿದೆ. ಗಾಯಾಳು ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.