SHOCKING : ಬೆಂಗಳೂರಿನಲ್ಲಿ ‘ಪೈಶಾಚಿಕ ಕೃತ್ಯ’ : ಎರಡು ನಾಟಿ ಹೋರಿಗಳ ಕತ್ತು ಕೊಯ್ದ ರಸ್ತೆಗೆ ಎಸೆದ ಕಟುಕರು.!

ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ನಡೆದಿದ್ದು, ಕಟುಕರು ಎರಡು ನಾಟಿ ಹೋರಿಗಳ ಕತ್ತು ಕೊಯ್ದ ಎಸೆದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದಲ್ಲಿ ನಡೆದಿದೆ.

ಕಟುಕರು ನಾಟಿ ಹೋರಿಗಳ ಕತ್ತು ಕೊಯ್ದು ರಸ್ತೆಗೆ ಎಸೆದಿದ್ದು, ಅಮಾನವೀಯ ಘಟನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ಕಡೆ ಹೋರಿಗಳನ್ನು ಕೊಂದು ಇಲ್ಲಿಗೆ ತಂದು ಎಸೆದಿರಬಹುದೆಂದು ಗ್ರಾಮಸ್ಥರು ಶಂಕಿಸಿದ್ದಾರೆ.

ನಾಟಿ ಹೋರಿಗಳ ಮೇಲೆ ಬಣ್ಣದಲ್ಲಿ ನಂಬರ್ ಬರೆಯಲಾಗಿದ್ದು, ಅಕ್ರಮವಾಗಿ ಕಳ್ಳಸಾಗಣೆ ಮಾಡಲಾಗುತ್ತಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read