ಬೆಂಗಳೂರು: ಇಬ್ಬರು ಮನೆ ಮಾಲೀಕರ ಜಗಳದಲ್ಲಿ ಪಿಎಸ್ ಐ ಓರ್ವರು ಬಾಡಿಗೆದಾರನ ಮೇಲೆ ಹಲ್ಲೆ ನಡೆಸಿದ್ದು, ಬಾಡಿಗೆದಾರನ ಕಿವಿ ಶಾಶ್ವತವಾಗಿ ಕಿವುಡಾಗಿರುವ ಆರೋಪ ಕೇಳಿಬಂದಿದೆ.
ಬೇಗೂರು ಪಿಎಸ್ ಐ ಪುನೀತ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ೌದಯ್ ಎಂಬ ಬಾಡಿಗೆದಾರನನ್ನು ಅನಗತ್ಯವಾಗಿ ಠಾಣೆಗೆ ಕರೆದು ಪಿಎಸ್ ಐ ಪುನೀತ್, ಅವಾಚ್ಯವಾಗಿ ನಿಂದಿಸಿ, ಕಾಲಿನಿಂದ ಒದ್ದು, ಕಪಾಳಕ್ಕೆ ಬಾರಿಸಿದ್ದಾರೆ. ಇದರಿಂದ ಉದಯ್ ಅವರ ಎಡಕಿವಿ ಸಂಪೂರ್ಣ ಕಿವುಡಾಗಿದ್ದು, ಶ್ರವಣದೋಷವುಂಟಾಗಿದೆ.
ಈ ಬಗ್ಗೆ ಹಲ್ಲೆಗೊಳಗಾಗಿರುವ ಉದಯ್ ಪರ ವಕೀಲರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇಬ್ಬರು ಮನೆ ಮಾಲೀಕರ ನಡುವೆ ನಡೆದ ಜಗಳದ ವಿಚಾರವಗಿ ಪಿಎಸ್ ಐ ಪುನೀತ್ ಉದಯ್ ಎಂಬುವವರನ್ನು ಠಾಣೆಗೆ ಕರೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.