BREAKING: ಫುಟ್ ಪಾತ್ ಮೇಲೆ ಮಲಗ್ಗಿದ್ದವರ ಮೇಲೆ ಮದ್ಯದ ಅಮಲಲ್ಲಿ ಕಾರ್ ಹರಿಸಿದ ಚಾಲಕ: ಐವರು ಗಂಭೀರ

ನವದೆಹಲಿ: ದೆಹಲಿಯ ವಸಂತ ವಿಹಾರದಲ್ಲಿ ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಾರ್ ಹರಿಸಿದ ಘಟನೆ ನಡೆದಿದೆ.

ಮದ್ಯದ ಅಮಲಿನಲ್ಲಿ ಐವರ ಮೇಲೆ ಕಾರ್ ಹರಿಸಿದ ಚಾಲಕನನ್ನು ಬಂಧಿಸಲಾಗಿದೆ. ರಾಜಸ್ಥಾನದ ದಂಪತಿ ಮತ್ತು ಪುತ್ರಿ ಹಾಗೂ ಮತ್ತಿಬ್ಬರು ದಂಪತಿಗಳಿಗೆ ಗಂಭೀರ ಗಾಯಗಳಾಗಿವೆ. ದ್ವಾರಕಾ ನಿವಾಸಿಯಾಗಿರುವ ಆಡಿ ಕಾರ್ ಚಾಲಕ ಉತ್ಸವ್ ಶೇಖರ್(40) ಎಂಬುವನನ್ನು ಬಂಧಿಸಲಾಗಿದೆ.

ನೈಋತ್ಯ ದೆಹಲಿಯ ವಸಂತ್ ವಿಹಾರ್ ಪ್ರದೇಶದ ಶಿವಾ ಕ್ಯಾಂಪ್ ಬಳಿ ಫುಟ್‌ಪಾತ್‌ನಲ್ಲಿ ಮಲಗಿದ್ದಾಗ ಆಡಿ ಕಾರಿನ ಕುಡಿದ ಚಾಲಕನೊಬ್ಬ ಇಬ್ಬರು ದಂಪತಿಗಳು ಮತ್ತು ಎಂಟು ವರ್ಷದ ಬಾಲಕಿ ಸೇರಿದಂತೆ ಐದು ಜನರ ಮೇಲೆ ಹರಿಸಿಡಿ ಗಾಯಗೊಳಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಜುಲೈ 9 ರಂದು ಬೆಳಗಿನ ಜಾವ 1:45 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರಿನ ಚಾಲಕ ಉತ್ಸವ್ ಶೇಖರ್ (40) ಅವರನ್ನು ಬಂಧಿಸಲಾಗಿದೆ. ಘಟನೆಯ ಸಮಯದಲ್ಲಿ ಅವರು ಕುಡಿದಿದ್ದರು ಎಂದು ಅವರ ವೈದ್ಯಕೀಯ ವರದಿಗಳು ದೃಢಪಡಿಸಿವೆ. ಸ್ಥಳಕ್ಕೆ ತಲುಪುವ ಹೊತ್ತಿಗೆ, ಗಾಯಾಳುಗಳನ್ನು ಈಗಾಗಲೇ ಹತ್ತಿರದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read