ಬೆಂಗಳೂರು : ಇಂದು ಮಣ್ಣೆತ್ತಿನ ಅಮಾವಾಸ್ಯೆ ಆದ್ದರಿಂದ ನಾಡಿನ ರೈತರಿಗೆ ಸಿಎಂ ಸಿದ್ದರಾಮಯ್ಯ ಮಣ್ಣೆತ್ತಿನ ಅಮಾವಾಸ್ಯೆಯ ಶುಭಾಶಯ ಕೋರಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ನೆಲದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ರೈತನಿಗೆ ಎತ್ತುಗಳೆಂದರೆ ಸಾಕು ಪ್ರಾಣಿಗಳಷ್ಟೆ ಅಲ್ಲ, ಕುಟುಂಬ ಸದಸ್ಯರಿದ್ದಂತೆ.
ಮಣ್ಣೆತ್ತಿನ ಅಮಾವಾಸ್ಯೆಯು ಕೃಷಿಕಾರ್ಯಗಳಲ್ಲಿ ರೈತನಿಗೆ ಹೆಗಲಾಗಿ ದುಡಿಯುವ ಎತ್ತುಗಳನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವ ಪವಿತ್ರ ದಿನ.ಈ ವರ್ಷ ಸಮೃದ್ಧ ಮಳೆ ಬೀಳುತ್ತಿದ್ದು, ಹಳ್ಳ, ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಭೂತಾಯಿಯ ಮೇಲೆ ಭರವಸೆಯನ್ನಿಟ್ಟು ಕೃಷಿಯಲ್ಲಿ ತೊಡಗಿರುವ ರೈತರಿಗೆ ಬರಪೂರ ಫಸಲು ಕೈಸೇರಲಿ ಎಂದು ಹಬ್ಬದ ಶುಭ ಘಳಿಗೆಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ನೆಲದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ರೈತನಿಗೆ ಎತ್ತುಗಳೆಂದರೆ ಸಾಕು ಪ್ರಾಣಿಗಳಷ್ಟೆ ಅಲ್ಲ, ಕುಟುಂಬ ಸದಸ್ಯರಿದ್ದಂತೆ.
— Siddaramaiah (@siddaramaiah) June 25, 2025
ಮಣ್ಣೆತ್ತಿನ ಅಮಾವಾಸ್ಯೆಯು ಕೃಷಿಕಾರ್ಯಗಳಲ್ಲಿ ರೈತನಿಗೆ ಹೆಗಲಾಗಿ ದುಡಿಯುವ ಎತ್ತುಗಳನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವ ಪವಿತ್ರ ದಿನ.
ಈ ವರ್ಷ ಸಮೃದ್ಧ ಮಳೆ ಬೀಳುತ್ತಿದ್ದು, ಹಳ್ಳ, ಕೊಳ್ಳ, ನದಿಗಳು ಮೈದುಂಬಿ… pic.twitter.com/O6QYS5wHR1