SHOCKING : ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಲವರ್ ಜೊತೆ ಸೇರಿ ತಾಯಿಯನ್ನೇ ಕೊಂದ ‘SSLC’ ಬಾಲಕಿ.!

ಹೈದರಾಬಾದ್ ನಗರದಲ್ಲಿ ಮತ್ತೊಂದು ಘೋರ ಘಟನೆ ಬೆಳಕಿಗೆ ಬಂದಿದೆ. ಜೀಡಿಮೆಟ್ಲಾದಲ್ಲಿ ಹತ್ತನೇ ತರಗತಿಯ ಬಾಲಕಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ತನ್ನ ಮಲತಾಯಿಯನ್ನು ಕೊಲೆ ಮಾಡಿದ್ದಾಳೆ.ತಮ್ಮ ಪ್ರೇಮ ಸಂಬಂಧವನ್ನು ವಿರೋಧಿಸಿ ಖಂಡಿಸಿದ್ದಕ್ಕಾಗಿ ತನ್ನ ತಾಯಿಯನ್ನು ಆಕೆ ಬರ್ಬರವಾಗಿ ಕೊಂದಿದ್ದಾಳೆ.

ಜೀಡಿಮೆಟ್ಲಾದ ಹತ್ತನೇ ತರಗತಿಯ ಹುಡುಗಿಯೊಬ್ಬಳು ಸುಮಾರು 8 ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಶಿವ (19) ಎಂಬ ಯುವಕನ ಪರಿಚಯ ಮಾಡಿಕೊಂಡಿದ್ದಳು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದರು.

ನಂತರ ಅವರು ಫೋನ್ ಕರೆ ಮತ್ತು ಮೆಸೇಜ್ ಮಾಡುವ ಮೂಲಕ ಹೊರಗೆ ಭೇಟಿಯಾಗಲು ಪ್ರಾರಂಭಿಸಿದರು. ಹುಡುಗಿಯ ತಾಯಿ ಅಂಜಲಿಗೆ ಈ ವಿಷಯ ತಿಳಿಯಿತು. ಈ ವಯಸ್ಸಿನಲ್ಲಿ ಲವ್ ಎಲ್ಲ ಬೇಡ, ಓದಿನ ಕಡೆ ಗಮನ ಹರಿಸಬೇಕೆಂದು ತಾಯಿ ತನ್ನ ಮಗಳಿಗೆ ಎಚ್ಚರಿಸಿದ್ದಳು.

ತಾಯಿ ವಿರೋಧಿಸಿದ ನಂತರ ಹುಡುಗಿ ತನ್ನ ತಾಯಿಯ ಮೇಲೆ ದ್ವೇಷ ಸಾಧಿಸಿದಳು. ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದ ತಾಯಿಯನ್ನು ಕೊಲ್ಲಲು ನಿರ್ಧರಿಸಿದಳು ಮತ್ತು ಈ ಬಗ್ಗೆ ತನ್ನ ಗೆಳೆಯ ಶಿವನಿಗೆ ಹೇಳಿದಳು.ಒಂದು ವಾರದ ಹಿಂದೆ, ಹುಡುಗಿ ಶಿವನೊಂದಿಗೆ ಓಡಿಹೋದಳು. ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದಾಗ, ಜೀಡಿಮೆಟ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂರು ದಿನಗಳ ನಂತರ ಅವಳು ಮನೆಗೆ ಬಂದಳು.
ನಮ್ಮ ಪ್ರೀತಿಗೆ ಅಡ್ಡಿಯಾದ ತಾಯಿಯನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ನಿರ್ಧರಿಸಿದ ಬಾಲಕಿ ಸ್ಕೆಚ್ ಹಾಕಿದ್ದಳು.

ಸೋಮವಾರ ಸಂಜೆ (ಜೂನ್ 23) ನಲ್ಗೊಂಡದಿಂದ ಬಂದಿದ್ದ ಶಿವ ತನ್ನ ಗೆಳೆಯ ಮತ್ತು ತಮ್ಮ ಯಶವಂತ್ ಜೊತೆ ಹುಡುಗಿಯ ಮನೆಗೆ ತಲುಪಿದ್ದ. ಅಂಜಲಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ ಶಿವ ಹಿಂದಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಶಿವ ಅಂಜಲಿಯ ಮುಖವನ್ನು ಬೆಡ್ಶೀಟ್ನಿಂದ ಮುಚ್ಚಿದ್ದಾನೆ ಮತ್ತು ಹುಡುಗಿ ಸುತ್ತಿಗೆಯಿಂದ ತನ್ನ ತಾಯಿಯ ತಲೆಗೆ ಹೊಡೆದಿದ್ದಾಳೆ. ನಂತರ ಶಿವನ ಕಿರಿಯ ಸಹೋದರ ಯಶವಂತ್ ಅಂಜಲಿಯ ತಲೆಯನ್ನು ಚಾಕುವಿನಿಂದ ಕತ್ತರಿಸಿದ್ದಾನೆ. ಸುತ್ತಿಗೆಯಿಂದ ಹೊಡೆದು, ತಲೆಗೆ ಚಾಕುವಿನಿಂದ ಹೊಡೆದು ಕ್ರೂರವಾಗಿ ಕೊಲೆ ಮಾಡಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ಬಂದು ಶವವನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮತ್ತೊಂದು ಪ್ರಮುಖ ಸಂಗತಿಯೆಂದರೆ, ಕೊಲೆಯಾದ ತಾಯಿ ಅಂಜಲಿ ತೆಲಂಗಾಣ ಸಶಸ್ತ್ರ ಹೋರಾಟಗಾರ ಚಕಲಿ ಐಲಮ್ಮ ಅವರ ಮರಿಮೊಮ್ಮಗಳು. ಈ ಕ್ರೂರ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read