ಬೆಂಗಳೂರು: ಇಂದು ಇನ್ಸ್ಪೆಕ್ಟರ್, ಎಸಿಪಿಗಳ ಜೊತೆಗೆ ಸಭೆ ನಡೆಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಭೆಯಲ್ಲಿ ಬೇಸಿಕ್ ಪೋಲಿಸಿಂಗ್ ಮಾಡಿ ಎಂದು ಹೇಳಿದ್ದೇನೆ. ರೌಡಿಸಂ, ಗ್ಯಾಂಬ್ಲಿಂಗ್, ಮಟ್ಕಾ, ಬೆಟ್ಟಿಂಗ್ ತಡೆಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರ ಜೊತೆಗೆ ಉತ್ತಮ ಸಂಬಂಧ ಹೊಂದಬೇಕು. ಜನರಿಗೆ ಸ್ಪಂದಿಸುವ ಜನಸ್ನೇಹಿ ಪೊಲೀಸರಾಗಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರಕ್ಕೆ ಅನೇಕ ಪೊಲೀಸ್ ಠಾಣೆಗಳನ್ನು ಸೇರಿಸಲಾಗಿದೆ ಆ ಠಾಣೆಗಳಿಗೂ ಸಿಬ್ಬಂದಿ ನೀಡಿ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.