ಬೆಳಗಾವಿ: ಬೆಳಗಾವಿಯ ಸಂತ ಬಸ್ತವಾಡದಲ್ಲಿ ಕುರಾನ್ ಸುಟ್ಟ ಪ್ರಕರಣ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಸರ್ಕಾರ ಆದೇಶ ಹೊರಡಿಸಿದೆ.
ಪ್ರಕರಣ ಸಿಐಡಿಗೆ ವರ್ಗಾವಣೆಯಾಗುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ. 100/2025 ಕಲಂ. 329 (4), 326 (ಜಿ), 298, 299, 196 (1) (B), BNS-2023 ಈ ಪ್ರಕರಣವನ್ನು ಸಿಐಡಿ ತಂಡ ತನಿಖೆಗೆ ವಹಸಿಕೊಂಡು ಸ್ಥಳ ಪರಿಶೀಲನೆ ನಡೆಸಿದೆ.
ಕಿಡಿಗೇಡಿಗಳು ಮಸೀದಿಯಿಂದ ಕುರಾನ್ ಪುಸ್ತಕ ಕದ್ದು, ಬಳಿಕ ಕುರಾನ್ ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಇದರಿಂದ ಮುಸ್ಲಿಂ ಸಮಾಜದ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಸಧ್ಯ ಈ ಪ್ರಕರಣವನ್ನು ಸಿಐಡಿ ಘಟಕದ ತನಿಖಾಧಿಕಾರಿಗಳಾದ ಸುಲೇಮಾನ ತಹಸಿಲ್ದಾರ ನೇತೃತ್ವದ ತಂಡದಿಂದ ತನಿಖೆ ನಡೆಸಲಾಗುತ್ತಿದೆ.