ಮಾಜಿ ಭಾರತೀಯ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಸಹೋದರ ಸ್ನೇಹಾಶಿಶ್ ಗಂಗೂಲಿ ಮತ್ತು ಅವರ ಪತ್ನಿ ಅರ್ಪಿತಾ ಗಂಗೂಲಿ ಸಮುದ್ರದಲ್ಲಿ ಸ್ಪೀಡ್ಬೋಟ್ ಅಪಘಾತಕ್ಕೆ ಒಳಗಾಗಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬೋಟ್ ಪಲ್ಟಿಯಾದ ನಂತರ ಇಬ್ಬರೂ ನೀರಿಗೆ ಬಿದ್ದರೂ, ಜೀವ ರಕ್ಷಕರು ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ರಕ್ಷಿಸಿದ್ದಾರೆ.
ಈ ಘಟನೆ ಭಾನುವಾರ ಒಡಿಶಾದ ಪುರಿ ಬೀಚ್ನಲ್ಲಿ ನಡೆದಿದೆ. ರಜಾ ದಿನಗಳನ್ನು ಕಳೆಯಲು ಪುರಿಗೆ ಬಂದಿದ್ದ ಸ್ನೇಹಾಶಿಶ್ ಗಂಗೂಲಿ ಮತ್ತು ಅರ್ಪಿತಾ ಗಂಗೂಲಿ ಈ ದುರ್ಘಟನೆಗೆ ಒಳಗಾಗಿದ್ದಾರೆ. ವರದಿಗಳ ಪ್ರಕಾರ, ಸಮುದ್ರದಲ್ಲಿ ಪ್ರತಿಕೂಲ ವಾತಾವರಣವಿದ್ದರೂ ಅವರನ್ನು ಬೋಟ್ನಲ್ಲಿ ಕರೆದೊಯ್ಯಲಾಗಿತ್ತು. ಪ್ರಬಲ ಅಲೆಗಳ ಕಾರಣದಿಂದಾಗಿ ಬೋಟ್ ಪಲ್ಟಿಯಾಗಿ, ಅವರು ನೀರಿಗೆ ಎಸೆಯಲ್ಪಟ್ಟಿದ್ದಾರೆ. ಘಟನೆಯ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಪಘಾತದಿಂದ ಪಾರಾದ ಅರ್ಪಿತಾ ಗಂಗೂಲಿ, ಬೋಟ್ ಕಡಿಮೆ ಲೋಡ್ನಲ್ಲಿದ್ದ ಕಾರಣ ಪಲ್ಟಿಯಾಗಿದೆ ಎಂದು ಆರೋಪಿಸಿದ್ದಾರೆ.
“ಸಮುದ್ರವು ಅಲೆಗಳಿಂದ ತುಂಬಿತ್ತು. ಹಣದ ಆಸೆಯಿಂದ, ಅವರು ಹತ್ತು ಜನರಿಗೆ ಮೀಸಲಾದ ದೋಣಿಯನ್ನು ಕೇವಲ ನಾಲ್ಕು ಪ್ರಯಾಣಿಕರೊಂದಿಗೆ ಓಡಿಸಿದರು. ಇದು ಅಂದು ಸಮುದ್ರಕ್ಕೆ ಹೋಗುತ್ತಿದ್ದ ಕೊನೆಯ ದೋಣಿಯಾಗಿತ್ತು. ನಾವು ಹವಾಮಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೆವು, ಆದರೆ ನಿರ್ವಾಹಕರು ಚಿಂತಿಸಬೇಕಾಗಿಲ್ಲ ಎಂದು ಭರವಸೆ ನೀಡಿದರು. ನಾವು ಸಮುದ್ರಕ್ಕೆ ಹೋದ ತಕ್ಷಣ, ಒಂದು ದೊಡ್ಡ ಅಲೆ ದೋಣಿಗೆ ಅಪ್ಪಳಿಸಿತು ಮತ್ತು ಅದನ್ನು ಪಲ್ಟಿ ಮಾಡಿತು. ಜೀವ ರಕ್ಷಕರು ಸಮಯಕ್ಕೆ ಸರಿಯಾಗಿ ಬರದಿದ್ದರೆ, ನಾವು ಬದುಕುಳಿಯುತ್ತಿರಲಿಲ್ಲ. ನಾನು ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಈ ರೀತಿಯ ಅನುಭವ ನನಗೆ ಎಂದಿಗೂ ಆಗಿರಲಿಲ್ಲ. ದೋಣಿಯಲ್ಲಿ ಹೆಚ್ಚಿನ ಜನರು ಇದ್ದಿದ್ದರೆ, ಅದು ಪಲ್ಟಿಯಾಗದೇ ಇರುತ್ತಿತ್ತು” ಎಂದು ಅವರು ಹೇಳಿದ್ದಾರೆ.
VIDEO | Puri, Odisha: Cricket Association of Bengal (CAB) President and brother of former Indian cricket team captain Sourav Ganguly, Snehasish Ganguly, and his wife Arpita Ganguly were safely rescued after they encountered a horror as their speedboat capsized off Puri coast.… pic.twitter.com/rWCOB4bgYm
— Press Trust of India (@PTI_News) May 26, 2025