ಇಸ್ಲಾಮಾಬಾದ್: ಭಾರತದ ದಾಳಿಯಿಂದ ನಮ್ಮನ್ನು ರಕ್ಷಿಸಿ ಎಂದು ಪಾಕ್ ಸಂಸದ ತಾಹಿರ್ ಇಕ್ಬಾಲ್ ಕಣ್ಣೀರು ಸುರಿಸಿದ್ದು, ದಯಾಮಾಡಿ ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.
ಗುರುವಾರ ಪಾಕಿಸ್ತಾನದ ಸಂಸದರು ರಾಷ್ಟ್ರೀಯ ಅಸೆಂಬ್ಲಿಯೊಳಗೆ ‘ಭಾರತದಿಂದ ಪಾಕಿಸ್ತಾನವನ್ನು ರಕ್ಷಿಸಿ’ ಎಂದು ಸರ್ಕಾರವನ್ನು ಬೇಡಿಕೊಂಡರು. ಪಾಕಿಸ್ತಾನದ ಮಾಜಿ ಸೇನಾಧಿಕಾರಿ ತಾಹಿರ್ ಇಕ್ಬಾಲ್ ಅವರು ವಿಧಾನಸಭೆಯೊಳಗೆ ಕಣ್ಣೀರು ಸುರಿಸುತ್ತಿರುವ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.
26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಪ್ರಮುಖ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ಒಂದು ದಿನದ ನಂತರ ಅವರ ಭಾವನಾತ್ಮಕ ಮನವಿ ಬಂದಿದೆ.
ಭಾರತದ ನಡೆಯುತ್ತಿರುವ ಕಾರ್ಯಾಚರಣೆಗಳ ಬಗ್ಗೆ ಮಾತನಾಡುತ್ತಾ, ತಾಹಿರ್, “ದೇವರೇ, ದಯವಿಟ್ಟು ಈ ದೇಶವನ್ನು ಸುರಕ್ಷಿತವಾಗಿರಿಸಿಕೊಳ್ಳಿ ಎಂದು ನಡುಗುವ ಧ್ವನಿಯಲ್ಲಿ ಹೇಳಿ ಕಣ್ಣೀರಿಟ್ಟಿದ್ದಾರೆ.
“Major Tahir Iqbal — ex-Pak Army, now MP — crying in Pakistan’s Parliament after #OperationSindoor. ‘Ya Allah madad!’ echoes in the Assembly. This is the condition of Pakistan’s leaders — breaking down on live TV. Kya haal bana diya hai!” pic.twitter.com/Z5AxRwjbrg
— Meenu Thakur (@JournoMeenu) May 8, 2025