ಕಂದಹಾರ್ ‘ನ ಐಸಿ-814 ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಅಬ್ದುಲ್ ರವೂಫ್ ಅಜರ್ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಆಪರೇಷನ್ ಸಿಂಧೂರ್ನಲ್ಲಿ ಭಾರತವು ಜೈಶ್-ಎ-ಮೊಹಮ್ಮದ್ ಕಾರ್ಯಾಚರಣೆಯ ಮುಖ್ಯಸ್ಥ ಮತ್ತು ಐಸಿ -814 ಅಪಹರಣದ ಮಾಸ್ಟರ್ ಮೈಂಡ್ ಅಬ್ದುಲ್ ರವೂಫ್ ಅಜರ್ನನ್ನು ಹತ್ಯೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪಂಜಾಬ್ ಪ್ರಾಂತ್ಯದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಬಹವಾಲ್ಪುರ ಮತ್ತು ಮುರಿಡ್ಕೆಯಲ್ಲಿ ದಾಳಿ ನಡೆಸಿ, ಜೈಶ್ ಮತ್ತು ಲಷ್ಕರ್ನ ಪ್ರಧಾನ ಕಚೇರಿಗಳನ್ನು ನಾಶಪಡಿಸಿದವು. ಹತ್ಯೆಗೀಡಾದವರಲ್ಲಿ ಜೈಶ್-ಮೊಹಮ್ಮದ್ನ ಕಾರ್ಯಾಚರಣೆ ಮುಖ್ಯಸ್ಥ, ಐಸಿ -814 ಅಪಹರಣದ ಮಾಸ್ಟರ್ ಮೈಂಡ್ ಮತ್ತು ಅಂತರರಾಷ್ಟ್ರೀಯ ಜಿಹಾದಿ ಜಾಲಗಳಲ್ಲಿ ಕೇಂದ್ರ ವ್ಯಕ್ತಿ ಅಬ್ದುಲ್ ರವೂಫ್ ಅಜರ್ ಕೂಡ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
You Might Also Like
TAGGED:ಅಬ್ದುಲ್ ರವೂಫ್ ಅಜರ್