‘ಫುಲೆ’ ವಿವಾದ: ಬ್ರಾಹ್ಮಣರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಅನುರಾಗ್ ಕಶ್ಯಪ್ !

ಮುಂಬೈ: ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಇತ್ತೀಚೆಗೆ ನೀಡಿದ ಬ್ರಾಹ್ಮಣ ಸಮುದಾಯದ ಕುರಿತಾದ ಆಕ್ಷೇಪಾರ್ಹ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ‘ಫುಲೆ’ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಮತ್ತು ಕೆಲವು ಬ್ರಾಹ್ಮಣ ಗುಂಪುಗಳಿಂದ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ಕಶ್ಯಪ್ ಈ ಹೇಳಿಕೆ ನೀಡಿದ್ದಾರೆ.

ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜೀವನಚರಿತ್ರೆಯಾಧಾರಿತ ‘ಫುಲೆ’ ಚಿತ್ರವು ಏಪ್ರಿಲ್ 11 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಮಹಾರಾಷ್ಟ್ರದ ಬ್ರಾಹ್ಮಣ ಸಮುದಾಯದ ವಿರೋಧದಿಂದಾಗಿ ಬಿಡುಗಡೆಯನ್ನು ಏಪ್ರಿಲ್ 25 ಕ್ಕೆ ಮುಂದೂಡಲಾಗಿದೆ. ಚಿತ್ರದಲ್ಲಿ ತಮ್ಮನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅನಂತ್ ಮಹಾದೇವನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರತೀಕ್ ಗಾಂಧಿ ಮತ್ತು ಪಾತ್ರಲೇಖಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಸಿಬಿಎಫ್‌ಸಿ ಚಿತ್ರಕ್ಕೆ ‘ಯು’ ಪ್ರಮಾಣಪತ್ರ ನೀಡಿದ್ದರೂ, ‘ಮಹಾರ್’, ‘ಮಾಂಗ್’, ‘ಪೇಶ್ವಾಯಿ’ ಎಂಬ ಜಾತಿ ಉಲ್ಲೇಖಗಳನ್ನು ಮತ್ತು “3,000 ಸಾಲ್ ಪುರಾನಿ ಗುಲಾಮಿ” ಎಂಬ ಪದವನ್ನು “ಕೈ ಸಾಲ್ ಪುರಾನಿ ಗುಲಾಮಿ” ಎಂದು ಬದಲಾಯಿಸುವಂತೆ ಸೂಚಿಸಿತ್ತು. ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿರುವ ಅನುರಾಗ್ ಕಶ್ಯಪ್, ದೇಶದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲದಿದ್ದರೆ ಫುಲೆ ಅವರು ಹೋರಾಡಲು ಏಕೆ ಬೇಕಾಯಿತು ಎಂದು ಪ್ರಶ್ನಿಸಿದ್ದಾರೆ. “ಈಗ ಬ್ರಾಹ್ಮಣರಿಗೆ ನಾಚಿಕೆಯಾಗುತ್ತಿದೆಯೇ ಅಥವಾ ಅವರು ನಾಚಿಕೆಯಿಂದ ಸಾಯುತ್ತಿದ್ದಾರೆಯೇ ಅಥವಾ ಅವರು ನಾವು ನೋಡದ ಬೇರೆಯದೇ ಬ್ರಾಹ್ಮಣ ಭಾರತದಲ್ಲಿ ವಾಸಿಸುತ್ತಿದ್ದಾರೆಯೇ? ಇಲ್ಲಿ *** ಯಾರು ಎಂದು ಯಾರಾದರೂ ವಿವರಿಸಿ” ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿರುವ ಹೊರತಾಗಿಯೂ, ‘ಸಂತೋಷ್’ ಚಿತ್ರದ ಬಿಡುಗಡೆಯನ್ನು ತಡೆಹಿಡಿಯಲಾಗಿದೆ ಮತ್ತು ‘ಧಡಕ್ 2’ ಕೂಡ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಕಶ್ಯಪ್ ಪ್ರಶ್ನಿಸಿದ್ದಾರೆ. “ಭಾಯಿ, ಒಟ್ಟಾಗಿ ನಿರ್ಧರಿಸಿ. ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೋ ಇಲ್ಲವೋ… ‘ಧಡಕ್ 2’ ಪ್ರದರ್ಶನದಲ್ಲಿ ಸೆನ್ಸಾರ್ ಮಂಡಳಿಯು ಮೋದಿಜೀ ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಕೊನೆಗೊಳಿಸಿದ್ದಾರೆ ಎಂದು ಹೇಳಿತು. ಅದೇ ಆಧಾರದ ಮೇಲೆ ‘ಸಂತೋಷ್’ ಕೂಡ ಭಾರತದಲ್ಲಿ ಬಿಡುಗಡೆಯಾಗಲಿಲ್ಲ. ಈಗ ಬ್ರಾಹ್ಮಣರಿಗೆ ‘ಫುಲೆ’ಯಿಂದ ತೊಂದರೆಯಾಗಿದೆ. ಭಯ್ಯ, ಜಾತಿ ವ್ಯವಸ್ಥೆಯೇ ಇಲ್ಲದಿದ್ದಾಗ ನೀವು ಬ್ರಾಹ್ಮಣರಾಗುವುದು ಹೇಗೆ? ನೀವು ಯಾರು? ನಿಮಗೆ ಏಕೆ ಉರಿಯುತ್ತಿದೆ?” ಎಂದು ಅವರು ಹರಿಹಾಯ್ದಿದ್ದಾರೆ.

“ಜಾತಿ ವ್ಯವಸ್ಥೆಯೇ ಇಲ್ಲದಿದ್ದಾಗ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಏಕೆ ಇದ್ದರು? ಮೋದಿಜೀ ಅವರ ಪ್ರಕಾರ ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೆ ನಿಮ್ಮ ಬ್ರಾಹ್ಮಣತ್ವ ಅಸ್ತಿತ್ವದಲ್ಲಿಲ್ಲವೇ? ಅಥವಾ ಎಲ್ಲರೂ ಸೇರಿ ಎಲ್ಲರನ್ನು ಮೂರ್ಖರನ್ನಾಗಿಸುತ್ತಿದ್ದೀರಾ? ದಯವಿಟ್ಟು ಒಟ್ಟಾಗಿ ನಿರ್ಧರಿಸಿ. ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೋ ಇಲ್ಲವೋ. ಜನರು ದಡ್ಡರಲ್ಲ… ನೀವು ಬ್ರಾಹ್ಮಣರೋ ಅಥವಾ ಮೇಲೆ ಕುಳಿತಿರುವ ನಿಮ್ಮಪ್ಪಂದಿರೋ? ಈಗಲೇ ನಿರ್ಧರಿಸಿ” ಎಂದು ಕಶ್ಯಪ್ ತೀಕ್ಷ್ಣವಾಗಿ ನುಡಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read