ಸವಾಯಿ ಮಾಧೋಪುರದಲ್ಲಿ ಅಂಬೇಡ್ಕರ್ ಪ್ರತಿಮೆ ಬಳಿ ನಾಮಫಲಕ ತೆಗೆದಿದ್ದಕ್ಕೆ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ಶಾಸಕಿ ಇಂದಿರಾ ಮೀನಾ ಅವರು ಬಿಜೆಪಿ ನಾಯಕ ಹನುಮಾನ್ ದೀಕ್ಷಿತ್ ಅವರ ಕಾಲರ್ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಘಟನೆ ಭಾನುವಾರ ರಾತ್ರಿ ಬೋಲಿ ಪಟ್ಟಣದ ಅಂಬೇಡ್ಕರ್ ಚೌಕ್ನಲ್ಲಿ ನಡೆದಿದೆ. ಅಂಬೇಡ್ಕರ್ ಪ್ರತಿಮೆಯ ಪೀಠದಿಂದ ತಮ್ಮ ಹೆಸರಿನ ನಾಮಫಲಕವನ್ನು ತೆಗೆದುಹಾಕಿರುವುದನ್ನು ಗಮನಿಸಿದ ಮೀನಾ, ಅಲ್ಲಿದ್ದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ, ಬಿಜೆಪಿ ಮಂಡಲ ಅಧ್ಯಕ್ಷ ಹನುಮಾನ್ ದೀಕ್ಷಿತ್ ಅವರ ಕಾಲರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸದ್ಯ ನಾಮಫಲಕವನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಮಾನ್ ಸಿಂಗ್ ಗುರ್ಜಾರ್, ಮೀನಾ ಅವರ ಈ ವರ್ತನೆಯನ್ನು ಖಂಡಿಸಿದ್ದಾರೆ. ಉಪಮುಖ್ಯಮಂತ್ರಿ ಡಾ. ಪ್ರೇಮ್ಚಂದ್ ಬೈರ್ವಾ ಕೂಡ ಇಂದಿರಾ ಮೀನಾ ಅವರ ನಡವಳಿಕೆಯನ್ನು ಟೀಕಿಸಿದ್ದಾರೆ. “ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಕಳುಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಡಾ. ಅಂಬೇಡ್ಕರ್ ಅವರ ಘನತೆಯನ್ನು ಗೌರವಿಸಬೇಕು” ಎಂದು ಅವರು ಹೇಳಿದ್ದಾರೆ.
इंदिरा मीणा जी ही राजस्थान की लौह महिला हैं। वे उन लाखों महिलाओं के लिए प्रेरणा हैं जो पुरुषों से लड़ना चाहती हैं लेकिन लड़ नहीं पातीं। जब वे लड़ती हैं तो पुलिस वाले भी चुपचाप देखते हैं।pic.twitter.com/34wd0CwLd0
— Arvind Chotia (@arvindchotia) April 14, 2025