ನದಿಯಲ್ಲಿ ಸ್ನಾನ ಮಾಡಿ ಬಂದ ಅಯ್ಯಪ್ಪ ಸ್ವಾಮಿ ಭಕ್ತನಿಗೆ ಶಾಕ್

ಶಿವಮೊಗ್ಗ: ಅಯ್ಯಪ್ಪ ಸ್ವಾಮಿ ಭಕ್ತನ ಬೈಕ್ ಕಳವು ಮಾಡಿದ ಘಟನೆ ಶಿವಮೊಗ್ಗದ ವಾದಿ ಎ ಹುದಾ ತುಂಗಾ ನದಿ ಸೇತುವೆ ಸಮೀಪ ನಡೆದಿದೆ.

ಬೆಳಗಿನ ಜಾವ ತುಂಗಾ ನದಿಯಲ್ಲಿ ಸ್ನಾನ ಮಾಡಿ ವಾಪಸ್ ಬರುವ ವೇಳೆಗೆ ಬೈಕ್ ಕಳವು ಮಾಡಲಾಗಿದೆ. ಶಿವಮೊಗ್ಗದ ಶುಭಮಂಗಳ ಸಮುದಾಯ ಭವನ ಸಮೀಪದ ನಿವಾಸಿ ಗೋಪಿ ಅವರ ಬೈಕ್ ಕಳವು ಮಾಡಲಾಗಿದೆ. ಶಬರಿಮಲೆ ಯಾತ್ರೆಗೆ ಹೋಗುವ ಸಲುವಾಗಿ ಮಾಲೆ ಹಾಕಿಕೊಂಡಿರುವ ಗೋಪಿ ಸೀಗೆಹಟ್ಟಿಯ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ರಾತ್ರಿ ವೇಳೆ ತಂಗುತ್ತಿದ್ದರು. ನಿತ್ಯ ಬೆಳಗಿನ ಜಾವ ಬೈಕ್ ನಲ್ಲಿ ಸಮೀಪದ ತುಂಗಾ ನದಿಗೆ ಸ್ನಾನಕ್ಕೆ ಹೋಗುತ್ತಿದ್ದರು. ಸ್ನಾನ ಮಾಡಿ ವಾಪಸ್ ಬರುವಾಗ ಅವರ ಬೈಕ್ ಕಳವು ಮಾಡಲಾಗಿದ್ದು, ತುಂಗಾ ನಗರ ಠಾಣೆಗೆ ಗೋಪಿ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read