ಪತ್ನಿ, ಮಕ್ಕಳಿಂದಲೇ ಘೋರ ಕೃತ್ಯ: ಆಸ್ತಿಗಾಗಿ ಮೂಕ ವ್ಯಕ್ತಿಯ ಬರ್ಬರ ಹತ್ಯೆ

ಬೀದರ್: ಆಸ್ತಿಯನ್ನು ಬೇರೆಯವರಿಗೆ ಮಾಡಿಕೊಡುತ್ತಾನೆ ಎನ್ನುವ ಅನುಮಾನ ಮತ್ತು ಆತಂಕದಿಂದ ಮೂಕ ಮತ್ತು ಕಿವುಡನಾಗಿದ್ದ ವ್ಯಕ್ತಿಯನ್ನು ಆತನ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಸೇರಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಸಾತೋಳಿ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಶೇರಿಕಾರ(52) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಆಡಮ್ಮ, ಪುತ್ರರಾದ ಪ್ರಭಾಕರ, ಹನುಮಂತ, ಮಗಳು ರತ್ನಮ್ಮ ಸೇರಿ ಮನೆಯಲ್ಲಿ ಕೂಡಿ ಹಾಕಿ ಕಟ್ಟಿಗೆ, ಸಲಾಕೆಯಿಂದ ಕೈ ಕಾಲುಗಳನ್ನು ಮುರಿಯುವಂತೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ನವೆಂಬರ್ 8ರಂದು ಮನ್ನಳ್ಳಿ ಪೊಲೀಸ್ ಠಾಣೆಗೆ ಮೃತನ ಸಹೋದರ ಮಲ್ಲಿಕಾರ್ಜುನ ಶೇರಿಕಾರ ದೂರು ನೀಡಿದ್ದಾರೆ.

ತನ್ನ ಪಾಲಿಗೆ ಬಂದಿದ್ದ ಆಸ್ತಿಯನ್ನು ಮೂಕ, ಕಿವುಡನಾಗಿದ್ದರಿಂದ ಅಪರಿಚಿತರು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ ಎನ್ನುವ ಶಂಕೆಯಿಂದ ಬಸವರಾಜನನ್ನು ಮನೆಯಿಂದ ಹೊರಗೆ ಬಿಡುತ್ತಿರಲಿಲ್ಲ. ಆದರೂ ಮನೆಯವರ ಮಾತು ಕೇಳದೆ ಬಸವರಾಜ ಕೂಲಿ ಕೆಲಸ ಮಾಡಿ ಬರುತ್ತಿದ್ದ. ಮನೆಯಲ್ಲಿ ಆತನನ್ನು ಕೂಡಿಹಾಕಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read