KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಸರಿಯಾದ ಸಿದ್ಧತೆ ಇಲ್ಲದೆ ಇ- ಖಾತೆ ಕಡ್ಡಾಯ ಮಾಡಿದ ಸರ್ಕಾರ: ರಾಜ್ಯಾದ್ಯಂತ ಸರ್ವರ್ ಸಮಸ್ಯೆ: ಆಸ್ತಿ ಮಾಲೀಕರಿಗೆ ಸಂಕಷ್ಟ, ನೋಂದಣಿಗೆ ಪರದಾಟ

Published October 18, 2024 at 6:28 am
Share
SHARE

ಬೆಂಗಳೂರು: ಸರಿಯಾದ ಸಿದ್ಧತೆ ಇಲ್ಲದೆ ಇ- ಖಾತೆ ಕಡ್ಡಾಯ ಮಾಡಲಾಗಿದ್ದು, ರಾಜ್ಯ ಸರ್ಕಾರ ಜಾರಿಗೊಳಿಸಿದ ಹೊಸ ವ್ಯವಸ್ಥೆಯಿಂದ ಆಸ್ತಿ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.

ಆಸ್ತಿ ನೋಂದಣಿಯಾಗದೆ ಜನ ಹೈರಾಣಾಗಿದ್ದು, ಅಡಮಾನ ಸಾಲ ಪಡೆಯಲು ಕೂಡ ಅಡ್ಡಿಯಾಗಿದೆ. ರಾಜ್ಯದಾದ್ಯಂತ ಸರ್ವರ್ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಬಗೆಹರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಸಮರ್ಪಕ ಸಿದ್ಧತೆ ಕೈಗೊಳ್ಳದೆ ರಾಜ್ಯದಾತ್ಯಂತ ದಸ್ತಾವೇಜು ನೋಂದಣಿಗೆ ಸರ್ಕಾರ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಆಸ್ತಿ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಸರ್ವರ್ ಸಮಸ್ಯೆ ಕಾರಣ, ಖಾತೆಗಳಲ್ಲಿನ ದೋಷ, ಅಗತ್ಯ ದಾಖಲೆಗಳ ಕೊರತೆ, ಇತರೆ ಕಾರಣದಿಂದ ಇ- ಖಾತೆ ದೊರೆಯದೆ ಆಸ್ತಿ ಮಾಲೀಕರು ಪರದಾಡುವಂತಾಗಿದೆ.

ಇ- ಖಾತೆ ಇಲ್ಲದೆ ಆಸ್ತಿ ನೋಂದಣಿ ಸಾಧ್ಯವಿಲ್ಲದ ಕಾರಣ ಸಾರ್ವಜನಿಕರು ಆಸ್ತಿ ನೋಂದಣಿ, ಅಡಮಾನ ಸಾಲ ಪಡೆಯುವುದು ಸೇರಿ ಯಾವುದೇ ವಹಿವಾಟು ನಡೆಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಂದಾಯ ನಿವೇಶನ ಮತ್ತು ಅದರಲ್ಲಿ ಮನೆ ನಿರ್ಮಿಸಿದವರಿಗೆ ಇ- ಖಾತೆ ಇಲ್ಲದೆ ಮಾಲೀಕತ್ವ ಸಾಬೀತುಪಡಿಸುವುದು ಹೇಗೆ? ಪರಭಾರೆ ಮಾಡುವುದು ಹೇಗೆ ಎನ್ನುವ ಆತಂಕ ಎದುರಾಗಿದೆ.

ಇತ್ತೀಚೆಗೆ ರಾಜ್ಯಾದ್ಯಂತ ಸ್ಥಿರಾಸ್ತಿ ನೋಂದಣಿಗೆ ಇ- ಖಾತೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಆನ್ಲೈನ್ ನಲ್ಲಿ ಇ- ಖಾತೆ ಪಡೆಯಬಹುದು, ಸರ್ಕಾರಿ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ ಎಂದು ಕಂದಾಯ ಇಲಾಖೆ ಹೇಳಿದೆ. ಇ- ಖಾತೆ ಪಡೆಯಲು ವಿಧಿಸಿದ ಕಠಿಣ ನಿಯಮಗಳಿಂದಾಗಿ ಆನ್ಲೈನ್ ನಲ್ಲಿ ಖಾತೆ ಪಡೆಯಲಾಗದೆ ಜನರಿಗೆ ಸಮಸ್ಯೆ ಎದುರಾಗಿದೆ. ಆಸ್ತಿ ಮಾರಾಟ, ಖರೀದಿಗೆ ಇ- ಖಾತೆ ಬೇಕಿದ್ದು, ಅದನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.

ಇ-ಖಾತೆ ಕಡ್ಡಾಯ ಮಾಡಿದ ನಂತರವೂ ಇ- ಖಾತೆ ಇಲ್ಲದವರಿಗೆ ಇತರೆ ಕಾಲಂನಲ್ಲಿ ನಮೂದಿಸಿ ಆಸ್ತಿ ನೋಂದಣಿ ಮಾಡಲಾಗುತ್ತಿತ್ತು. ಈ ರೀತಿಯ ನೋಂದಣಿ ಈಗ ಸ್ಥಗಿತಗೊಳಿಸಲಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಶೇಕಡ 90ರಷ್ಟು ಮನೆ ನಿವೇಶನಗಳಿಗೆ ಕಂದಾಯ ಇಲಾಖೆ ನಿಯಮದಡಿ ಇ- ಖಾತೆ ದೊರೆಯುವುದಿಲ್ಲ. ಅವರ ಆಸ್ತಿ ಪರಭಾರೆ ಕೂಡ ಕಷ್ಟವಾಗಿದೆ. ಇ- ಖಾತೆ ಕಡ್ಡಾಯದಿಂದಾಗಿ ಅನೇಕ ನೋಂದಣಿಗೆ ಸಮಸ್ಯೆಯಾಗಿದೆ ಎನ್ನಲಾಗಿದೆ.

You Might Also Like

ಕೇದಾರನಾಥ ಮಾರ್ಗಮಧ್ಯೆ ರಸ್ತೆಯಲ್ಲೇ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್!

BIG NEWS: ಸಾಯುವ ಮುನ್ನ ನಿಮ್ಮ ಋಣ ತೀರಿಸುವೆ, ನಿಮ್ಮ ಹೃದಯದಲ್ಲಿ ಸ್ಥಾನ ಕೊಡಿ…. ಮಂಡ್ಯ ಜನತೆ ಮುಂದೆ ಮತ್ತೆ ಕಣ್ಣೀರಾದ ಕೇಂದ್ರ ಸಚಿವ ಕುಮಾರಸ್ವಾಮಿ

BIG NEWS: ಡಿ.ಕೆ.ಸುರೇಶ್ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು: ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ತಾನೆ ಎಂದು ಟಾಂಗ್!

JOB ALERT : ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ

H.D ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಾರೆ, ಸೀರಿಯಸ್ ಆಗಿ ತಗೋಬೇಡಿ : D.K ಸುರೇಶ್

TAGGED:Govtತೊಂದರೆಸರ್ಕಾರe-Account mandatoryPreparationಆಸ್ತಿ ನೋಂದಣಿಇ-ಖಾತಾ ಕಡ್ಡಾಯProperty OwnersಮಾಲೀಕರುServer Problem
Share This Article
Facebook Copy Link Print

Latest News

ಕೇದಾರನಾಥ ಮಾರ್ಗಮಧ್ಯೆ ರಸ್ತೆಯಲ್ಲೇ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್!
BIG NEWS: ಸಾಯುವ ಮುನ್ನ ನಿಮ್ಮ ಋಣ ತೀರಿಸುವೆ, ನಿಮ್ಮ ಹೃದಯದಲ್ಲಿ ಸ್ಥಾನ ಕೊಡಿ…. ಮಂಡ್ಯ ಜನತೆ ಮುಂದೆ ಮತ್ತೆ ಕಣ್ಣೀರಾದ ಕೇಂದ್ರ ಸಚಿವ ಕುಮಾರಸ್ವಾಮಿ
BIG NEWS: ಡಿ.ಕೆ.ಸುರೇಶ್ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು: ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ತಾನೆ ಎಂದು ಟಾಂಗ್!
JOB ALERT : ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!

Automotive

ತೇಜ್ ಪ್ರತಾಪ್ ಸ್ಕೂಟರ್ ಸವಾರಿ ; ನಿತೀಶ್ ನಿವಾಸದ ಮುಂದೆ ಗದ್ದಲ | Watch Video
ಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಬುಲೆಟ್; ಅದೃಷ್ಟವಶಾತ್ ಬೈಕ್ ಸವಾರ ಪಾರು | Watch
ʼಹೋಳಿʼ ಹಬ್ಬದಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಒಂದೇ ದಿನ ಬರೋಬ್ಬರಿ 7230 ಚಲನ್ ಜಾರಿ !

Entertainment

BREAKING : ನಟಿ ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ನೀಡಿ : ‘ಕೊಡವ ನ್ಯಾಷನಲ್ ಸಂಘಟನೆ’ಯಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ.!
ಮಾನಸಿಕ ಆರೋಗ್ಯದ ಬಗ್ಗೆ ಮಾತಾಡಿದ ಆಲಿಯಾ: ಥೆರಪಿಗೆ ಹೋಗ್ತೀನಿ ಅಂದ್ರು ನಟಿ !
ಮನೋಜ್ ಕುಮಾರ್ ಪ್ರಾರ್ಥನಾ ಸಭೆಯಲ್ಲಿ ಜಯಾ ಬಚ್ಚನ್ ಆಕ್ರೋಶ : ಮಹಿಳೆಯನ್ನು ತಳ್ಳಿ ಗದರಿಸಿದ ವಿಡಿಯೋ ವೈರಲ್ | Watch

Sports

IPL 2025: RCB ಗೆಲುವಿನ ಬೆನ್ನಲ್ಲೇ ಪ್ರೇಯಸಿಗೆ ಪ್ರಪೋಸ್ ಮಾಡಿದ ಯುವಕ | Watch
BREAKING NEWS: ಕಾಲ್ತುಳಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೆರವು ಘೋಷಿಸಿದ RCB
BREAKING: HAL ಏರ್ ಪೋರ್ಟ್ ಗೆ ಬಂದಿಳಿದ RCB ಆಟಗಾರರು: ಅದ್ಧೂರಿ ಸ್ವಾಗತ

Special

‘ಸ್ಮಾರ್ಟ್ ಟಿವಿ’ ಸ್ವಚ್ಛಗೊಳಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..! ಇಲ್ಲಿದೆ ಟಿಪ್ಸ್
ವಿಸ್ಕಿ ಮತ್ತು ಬಿಯರ್‌ನೊಂದಿಗೆ ಇವುಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ.…!
ಆಯಾಸ ದೂರಗೊಳಿಸಿ ದೇಹಕ್ಕೆ ಶಕ್ತಿ ನೀಡುತ್ತೆ ಈ ʼನೈಸರ್ಗಿಕʼ ಆಹಾರ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?