alex Certify ಕಲಬೆರಕೆ ವಿವಾದದ ನಡುವೆಯೂ ತಿರುಪತಿ ಬ್ರಹ್ಮ ರಥೋತ್ಸವದಲ್ಲಿ 30 ಲಕ್ಷ ಲಡ್ಡು ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಬೆರಕೆ ವಿವಾದದ ನಡುವೆಯೂ ತಿರುಪತಿ ಬ್ರಹ್ಮ ರಥೋತ್ಸವದಲ್ಲಿ 30 ಲಕ್ಷ ಲಡ್ಡು ಮಾರಾಟ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದ ಕಲಬೆರಕೆ ವಿವಾದದ ನಡುವೆಯೂ ಭಕ್ತರು 30 ಲಕ್ಷ ಖರೀದಿಸಿದ್ದಾರೆ.

ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ನಡೆದ ವಾರ್ಷಿಕ ಬ್ರಹ್ಮರಥೋತ್ಸವದಲ್ಲಿ ಈ ಬಾರಿ ಭಕ್ತರು 30 ಲಕ್ಷ ಲಡ್ಡು ಪ್ರಸಾದ ಖರೀದಿಸಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ಮಾಹಿತಿ ನೀಡಿದೆ.

ಅ. 4 ರಿಂದ ಆರಂಭವಾದ ಬ್ರಹ್ಮರಥೋತ್ಸವ ಶನಿವಾರ ಅಂತ್ಯವಾಗಿದೆ. ಸುಮಾರು 15 ಲಕ್ಷ ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಕ್ತರು ಎಂಟು ದಿನಗಳ ಅವಧಿಯಲ್ಲಿ ಸುಮಾರು 30 ಲಕ್ಷ ಲಡ್ಡು ಪ್ರಸಾದ ಖರೀದಿ ಮಾಡಿದ್ದಾರೆ. ಕಳೆದ ವರ್ಷ ಬ್ರಹ್ಮರಥೋತ್ಸವದಲ್ಲಿಯೂ ಇಷ್ಟೇ ಪ್ರಮಾಣದ ಲಡ್ಡು ಮಾರಾಟವಾಗಿತ್ತು. ಈ ಬಾರಿ ಕೂಡ ಲಕ್ಷಾಂತರ ಭಕ್ತರು ಉತ್ಸವದಲ್ಲಿ ಭಾಗವಹಿಸಿ ಲಡ್ಡು ಖರೀದಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...